ನವದೆಹಲಿ, ಮಾರ್ಚ್, 17: ಐಪಿಎಲ್ ಆರಂಭಕ್ಕೂ ಮುನ್ನ ವಿಜಯ್ ಮಲ್ಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಈ ಬಗ್ಗೆ ಬಿಸಿಸಿಐ ಗೆ ಅಧಿಕೃತವಾಗಿ ತಿಳಿಸಿದೆ. ಮಾರ್ಚ್ 7 ರಂದೇ ಈ ಮೇಲ್ ಮುಖಾಂತರ ಐಪಿಎಲ್ ಗೌವರ್ನಿಂಗ್ ಕೌನ್ಸಿಲ್ ಗೆ ತಿಳಿಸಲಾಗಿದೆ ಎಂದು ಹೇಳಲಾಗಿದೆ. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]
ಮಲ್ಯ ರಾಜೀನಾಮೆ ಕುರಿತಾದ ಇ ಮೇಲ್ ನ್ನು ನಾವು ಪಡೆದುಕೊಂಡಿದ್ದೇವೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಹಾಗಾಗಿ ಇನ್ನು ಮುಂದೆ ರಸಲ್ ಆಡಂ ಆರ್ ಸಿಬಿಯಗ ಹೊಸ ಬಾಸ್ ಆಗಲಿದ್ದಾರೆ. ಆದರೆ ಮಲ್ಯ ಮಗ ಸಿದ್ಧಾರ್ಥ ಮಲ್ಯ ಆರ್ ಸಿಬಿಯ ಮೆಂಟರ್ ಆಗಿ ಮುಂದುವರಿದಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]
ಇ ಮೇಲ್ ಹೇಳುವಂತೆ ಸಿದ್ಧಾರ್ಥ ಮಲ್ಯ ಇನ್ನು ಮುಂದೆ ನಿರ್ದೇಶಕರಾಗುತ್ತಾರೆ. ಆದರೆ ತಂಡದ ಮಾಲೀಕತ್ವದಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಸಾಕಷ್ಟು ಸಾಲ ಮಾಡಿಕೊಂಡು ವಿದೇಶಕ್ಕೆ ತೆರಳಿರುವ ಮಲ್ಯ ವಿವಾದದ ಸುಳಿಗೆ ಸಿಲುಕಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಹುದ್ದೆಯನ್ನು ಕೈ ಬಿಟ್ಟಿದ್ದಾರೆ.