ಐರಿಷ್ ಆಟಗಾರರ ಕನಸು ಹಂಚಿಕೊಂಡ ನಾಯಕ ಬಲ್ಬರ್ನೈ
ಐರ್ಲೆಂಡ್ ಕ್ರಿಕೆಟ್ ತಂಡದ ನಾಯಕ ಆಂಡ್ರೋ ಬಲ್ಬರ್ನೈ ತಮ್ಮ ತಂಡದಲ್ಲಿ ಅನೇಕ ಅತ್ಯುತ್ತಮ ಟಿ20 ಆಟಗಾರರಿದ್ದರೂ ಅವರೆಲ್ಲರಿಗೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಅವಕಾಶ ದೊರೆತಿಲ್ಲ. ತಂಡದ ಬಹುತೇಕ ಆಟಗಾರರಿಗೆ ಐಪಿಎಲ್ನಲ್ಲಿ ಆಡುವುದು ದೊಡ್ಡ ಕನಸಾಗಿದೆ ಎಂದಿದ್ದಾರೆ. ಐಪಿಎಲ್ ಎಂಬುದು ಐರ್ಲೆಂಡ್ ಆಟಗಾರರಿಗೆ ಇನ್ನು ಕೂಡ ಕನಸಾಗಿಯೇ ಉಳಿದುಕೊಂಡಿದೆ ಎಂದಿದ್ದಾರೆ ಆಂಡ್ರೋ ಬಲ್ಬರ್ನೈ.
ಟಿ20 ಕ್ರಿಕೆಟ್ನ ಕಿರೀಟ ಐಪಿಎಲ್
"ನಮ್ಮಲ್ಲಿ ಸಾಕಷ್ಟು ಅತ್ಯುತ್ತಮ ಟಿ20 ಆಟಗಾರರಿದ್ದಾರೆ. ಐಪಿಎಲ್ನಲ್ಲಿ ಅವಕಾಶ ಪಡೆಯಲು ಎಷ್ಟು ಸ್ಪರ್ಧೆಗಳಿದೆ ಎಂಬುದರ ಬಗ್ಗೆ ನಮಗೆ ಅರಿವಿದೆ. ಹಾಗಾಗಿಯೇ ನಮ್ಮಲ್ಲಿರುವ ಸಾಕಷ್ಟು ಆಟಗಾರರಿಗೆ ಈ ಟೂರ್ನಿಯಲ್ಲಿ ಆಡುವುದು ದೊಡ್ಡ ಕನಸಾಗಿದೆ. ಐಪಿಎಲ್ ಟಿ20 ಕ್ರಿಕೆಟ್ನ ಕಿರೀಟವಾಗಿದೆ. ಇಂಥಾ ಲೀಗ್ನಲ್ಲಿ ಆಡುವ ಅವಕಾಶ ದೊರೆತಾಗ ಆಟಗಾರರ ಬೆಳವಣಿಗೆ ಮತ್ತಷ್ಟು ಹೆಚ್ಚಾಗುತ್ತದೆ. ನಮ್ಮಲ್ಲಿ ಸಾಕಷ್ಟು ಆಟಗಾರರು ಬೇರೆ ಬೇರೆ ಲೀಗ್ಗಳಲ್ಲಿ ಆಡುತ್ತಿದ್ದಾರೆ ಆದರೆ ಐಪಿಎಲ್ನಲ್ಲಿ ಆಡುವ ಅವಕಾಶ ಯಾರಿಗೂ ದೊರೆತಿಲ್ಲ" ಎಂದಿದ್ದಾರೆ ಆಂಡ್ರೋ ಬಲ್ಬರ್ನೈ.
ಐಪಿಎಲ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಐರ್ಲೆಂಡ್ ತಂಡದ ನಾಯಕ
ಭಾರತದ ವಿರುದ್ಧ ಆಡುವುದು ಉತ್ತಮ ಅವಕಾಶ
ಇನ್ನು ಮುಂದುವರಿದು ಮಾತನಾಡಿದ ಐರಿಷ್ ನಾಯಕ ಆಂಡ್ರೋ ಬಲ್ಬರ್ನೈ ಭಾರತ ವಿರುದ್ಧಧ ಟಿ20 ಸರಣಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತವರಿನಲ್ಲಿ ನಡೆಯಲಿರುವ ಭಾರತ ವಿರುದ್ಧಧ ಟಿ20 ಸರಣಿ ನಮಗೆ ಉತ್ತಮವಾದ ಅವಕಾಶವಾಗಿದೆ ಎಂದಿದ್ದಾರೆ. ಇನ್ನು ಮುಂಬರುವ ಟಿ20 ವಿಶ್ವಕಪ್ನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ತಂಡದ ಹೆಚ್ಚಿನ ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡಿರುತ್ತಾರೆ, ಹೀಗಾಗಿ ಅವರ ಮೇಲೆ ಹೆಚ್ಚಿನ ಒತ್ತಡಗಳಿದ್ದು ಅದು ಐರ್ಲೆಂಡ್ ತಂಡಕ್ಕೆ ಲಾಭವಾಗಬಹುದು ಎಂದಿದ್ದಾರೆ.
'Fab-4' ಪೈಕಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸುವ ಆಟಗಾರ ಈತ: ಭವಿಷ್ಯ ನುಡಿದ ಆಸಿಸ್ ದಿಗ್ಗಜ
ಐರ್ಲೆಂಡ್ ವಿರುದ್ಧ ಸೆಣೆಸಲಿದೆ ಹಾರ್ದಿಕ್ ಪಡೆ
ಇನ್ನು ಭಾರತ ತಂಡದ ಪ್ರಮುಖ ಆಟಗಾರರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿವ ನಿಟ್ಟಿಯಲ್ಲಿ ಯುಕೆಯಲ್ಲಿದ್ದಾರೆ. ಹೀಗಾಗಿ ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಐರ್ಲೆಂಡ್ಗೆ ಪ್ರಯಾಣ ಬೆಳೆಸಿದಿದೆ. ಹಾರ್ದಿಕ್ ಪಾಂಡ್ಯ ಈ ತಂಡದ ನಾಯಕತ್ವ ವಹಿಸಿಕೊಂಡಿದ್ದು ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಉಪನಾಯಕನಾಗಿದ್ದರೆ ಯುಜುವೇಂದ್ರ ಚಾಹಲ್, ದಿನೇಶ್ ಕಾರ್ತಿಕ್ ಮುಂತಾದ ಆಟಗಾರರು ಕೂಡ ಈ ತಂಡದಲ್ಲಿದ್ದಾರೆ.