ಕೊಹ್ಲಿ ಪಡೆಗೆ ತಲೆನೋವು
ಇಂಗ್ಲೆಂಡ್ ಪ್ರವಾಸದಲ್ಲಿದ್ದ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ಕೊಹ್ಲಿ ಪಡೆಗೆ ತಲೆನೋವಾಗಿದೆ. ಯಾಕೆಂದರೆ ಇಂಗ್ಲೆಂಡ್ನಲ್ಲಿರುವ ಕೆಎಲ್ ರಾಹುಲ್ ಮತ್ತು ಮಯಾಂಕ್ ಅರ್ಗರ್ವಾಲ್ ಸದ್ಯ ಅಂಥ ಫಾರ್ಮ್ನಲ್ಲಿ ಇದ್ದಂತಿಲ್ಲ. ಹೀಗಾಗಿ ಶ್ರೀಲಂಕಾದಲ್ಲಿರುವ ಕನ್ನಡಿಗ ದೇವದತ್ ಪಡಿಕಲ್ ಮತ್ತು ಪೃಥ್ವಿ ಶಾ ಅವರನ್ನು ಇಂಗ್ಲೆಂಡ್ಗೆ ಕರೆಸಿಕೊಳ್ಳುವ ಯೋಚನೆ ಭಾರತ ತಂಡ ನಿರ್ವಹಣಾ ಸಮಿತಿಯಲ್ಲಿದೆ. ಯಾಕೆಂದರೆ ಸದ್ಯ ಇಬ್ಬರೂ ಉತ್ತಮ ಫಾರ್ಮ್ನಲ್ಲಿದ್ದಾರೆ.
ಚೇತನ್ ಶರ್ಮಾಗೆ ಮೇಲ್
"ತಂಡದ ಆಡಳಿತ ವ್ಯವಸ್ಥಾಪಕರು ಕಳೆದ ತಿಂಗಳ ಕೊನೆಯಲ್ಲಿ ಮಾಜಿ ವೇಗಿ ಚೇತನ್ ಶರ್ಮಾ ಅವರಿಗೆ ಒಂದು ಮೇಲ್ ಕಳುಹಿಸಿದ್ದಾರೆ. ಇದರಲ್ಲಿ ನಮಗೆ ಇನ್ನೂ ಇಬ್ಬರು ಆರಂಭಿಕ ಬ್ಯಾಟ್ಸ್ಮನ್ಗಳನ್ನು ಕಳುಹಿಸಿಕೊಡಬೇಕೆಂದು ಕೋರಿಕೊಂಡಿದ್ದಾರೆ," ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಕೋರಿಕೆಗೆ ಸಂದಿಸುತ್ತಿಲ್ಲ
ಆದರೆ ಬಲ್ಲ ಮಾಹಿತಿಯ ಪ್ರಕಾರ, ಶರ್ಮಾ ಅವರಿಗೆ ಶುಬ್ಮನ್ ಗಿಲ್ಗೆ ಗಾಯವಾಗಿರುವ ಸಂಗತಿ ಗೊತ್ತಿದ್ದರೂ ಅವರು ತಂಡ ನಿರ್ವಹಣಾ ಸಮಿತಿಯ ಕೋರಿಗೆ ಸ್ಪಂದಿಸುವಂತೆ ಕಾಣುತ್ತಿಲ್ಲ ಎಂದು ಮೂಲ ತಿಳಿಸಿದೆ. ಕಾಲುನೋವಿಗೆ ತುತ್ತಾಗಿರುವ ಗಿಲ್, 6-8 ವಾರಗಳ ಕಾಲ ವಿಶ್ರಾಂತಿ ಪಡೆಯೋದು ಅನಿವಾರ್ಯವಾಗಿದೆ. ಹೀಗಾಗಿ ಭಾರತದ ಆಯ್ಕೆ ಸಮಿತಿ ಮುಂದೇನು ನಿರ್ಧರಿಸಲಿದೆ, ನಿರ್ವಹಣಾ ಸಮಿತಿ ಏನು ಮಾಡಲಿದೆ ಅನ್ನೋದು ಕುತೂಹಲ ಮೂಡಿಸಿದೆ.