ಆಲ್ರೌಂಡರ್ಗಳ ಆಟ
ಎರಡು ಪಂದ್ಯಗಳನ್ನು ಸೋತಿದ್ದ ಭಾರತಕ್ಕೆ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಲು ಇಳಿದ ಭಾರತ ತಂಡದ ಪರವಾಗಿ ನಾಯಕ ಕೊಹ್ಲಿ ಹೊರತುಪಡಿಸಿ ಪ್ರಮುಖ ಆಟಗಾರರು ಕೈಚೆಲ್ಲಿದ್ದರು. ಆ ಸಂದರ್ಭದಲ್ಲಿ ಜೊತೆಯಾಗಿದ್ದು ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಜೋಡಿ.
150 ರನ್ಗಳ ಜೊತೆಯಾಟ
ಬ್ಯಾಟ್ಸ್ಮನ್ಗಳಿಗೆ ಸ್ನೇಹಿಯಾಗಿರುವ ಮನುಕಾ ಓವಲ್ನಲ್ಲಿ ಭಾರತ ಕನಿಷ್ಟ ರನ್ಗಳ ಗುರಿಯನ್ನು ಎದುರಾಳಿಗೆ ನೀಡುವ ಆತಂಕವಿತ್ತು. ಆದರೆ ಪಾಂಡ್ಯ-ಜಡೇಜಾ ಜೋಡಿ ಈ ಪಂದ್ಯದಲ್ಲಿ ಶ್ರೇಷ್ಠವಾದ ಪ್ರದರ್ಶನವನ್ನು ನೀಡಿದರು. ಅಂತಿಮ 110 ಎಸೆತಗಳಲ್ಲಿ ಭರ್ಜರಿ 150ರನ್ ಒಟ್ಟುಕೂಡಿಸಿದರು. ಈ ಮೂಲಕ ತಂಡ ಸವಾಲಿನ ಮೊತ್ತವನ್ನು ಪೇರಿಸಲು ಕಾರಣರಾದರು. ಪಾಂಡ್ಯ 92 ರನ್ಗಳ ಕಾಣಿಕೆಯನ್ನು ನೀಡಿದರೆ ಜಡೇಜಾ 66 ರನ್ ಗಳಿಸಿದ್ದರು.
ಅದ್ಭುತವಾದ ಗೆಲುವು
ಈ ಗೆಲುವಿನ ಬಳಿಕ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸರಣಿಯನ್ನು ಸೋತ ಹೊರತಾಗಿಯೂ ಭಾರತ ತಂಡ ಅಂತಿಮ ಪಂದ್ಯದಲ್ಲಿ ಗೆದ್ದ ರೀತಿ ಅದ್ಭುತವಾಗಿದೆ. ಇದು ಸುದೀರ್ಘ ಸರಣಿಯಲ್ಲಿ ಕೆಲ ಬದಲಾವಣೆಗಳನ್ನು ತರುವ ಸಾದ್ಯತೆಯಿದೆ ಎಂದು ಗಂಗೂಲಿ ಹೇಳಿದ್ದಾರೆ.
ಜಡೇಜಾ ಪಾಂಡ್ಯ ಭಾರತಕ್ಕೆ ಆಸ್ತಿ
ಇನ್ನು ಇದೇ ಸಂದರ್ಭದಲ್ಲಿ ಗಂಗೂಲಿ ಜಡೇಜಾ ಹಾಗೂ ಪಾಂಡ್ಯ ಪ್ರದರ್ಶನವನ್ನು ಹೊಗಳಿದರು. ಸುದೀರ್ಘ ಕಾಲಕ್ಕೆ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಭಾರತ ತಂಡದ ಆಸ್ತಿಯಾಗಲಿದ್ದಾರೆ. ಕಠಿಣವಾದ ಸ್ಥಾನಗಳನ್ನು ಅವರು ತುಂಬಬಲ್ಲವರಾಗಿದ್ದಾರೆ ಎಂದು ಗಂಗೂಲಿ ಇಬ್ಬರು ಆಲ್ರೌಂಡರ್ಗಳ ಬಗ್ಗೆ ಮಾತನಾಡಿದ್ದಾರೆ.