ಕಳೆದ ಐಪಿಎಲ್ನಲ್ಲೂ ಗಾಯಗೊಂಡಿದ್ದರು
ಅಂದಹಾಗೆ ಕೇದಾರ್ ಜಾಧವ್ ಗಾಯಗೊಳ್ಳುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಐಪಿಎಲ್ನ ಆರಂಭಿಕ ಪಂದ್ಯಗಳಲ್ಲೇ ತೊಡೆ ಸಂಧು ನೋವಿನ ಸಮಸ್ಯೆ ಎದುರಿಸಿ ಲೀಗ್ನಿಂದ ಹಿಂದೆ ಸರಿದಿದ್ದರು. ಬಳಿಕ ಎಷ್ಯಾ ಕಪ್ ಹೋತ್ತಿಗೆ ಚೇತರಿಸಿಕೊಂಡ ಕೇದಾರ್ ಮರಳಿ ಮತ್ತದೇ ಗಾಯದ ಸಮಸ್ಯೆಗೆ ತುತ್ತಾದರು. ಇದೀಗ ಪ್ರಸಕ್ತ ಐಪಿಎಲ್ನಲ್ಲೂ ಗಾಯದ ಸಮಸ್ಯೆ ಅವರ ಬೆನ್ನತ್ತಿದೆ. ಪ್ರಸಕ್ತ ಐಪಿಎಲ್ನಲ್ಲಿ ಕೇದಾರ್ 14 ಪಂದ್ಯಗಳಿಂದ ಕೇವಲ 162 ರನ್ಗಳನ್ನು ಮಾತ್ರವೇ ಗಳಿಸಿದ್ದು, ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು.
ಕೇದಾರ್ ಬದಲಿಗೆ ಪಂತ್, ರಾಯುಡುಗೆ ಅವಕಾಶ ಸಾಧ್ಯತೆ
ಒಂದು ವೇಳೆ ಭುಜದ ಗಾಯದ ಸಮಸ್ಯೆಯಿಂದ ಕೇದಾರ್ ಚೇತರಿಸಲು ಸಾಧ್ಯವಾಗದೇ ಇದ್ದರೆ, ವಿಶ್ವಕಪ್ಗೆ ಪ್ರಕಟಿಸಲಾದ ಟೀಮ್ ಇಂಡಿಯಾಗೆ ಕಾಯ್ದಿರಿಸಿದ ಆಟಗಾರರಾದ ರಿಷಭ್ ಪಂತ್ ಅಥವಾ ಅಂಬಾಟಿ ರಾಯುಡು ಲಂಡನ್ ಟಿಕೆಟ್ ಲಭ್ಯವಾಗಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ
ಭಾರತ ತಂಡ ವಿಶ್ವಕಪ್ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಮೇ 25ರಂದು ಮತ್ತು ಬಾಂಗ್ಲಾದೇಶ ವಿರುದ್ಧ ಮೇ 22ರಂದು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ 50 ಓವರ್ಗಳ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಜೂನ್ 5ರಂದು ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ವಿಶ್ವಕಪ್ನಲ್ಲಿ ಆಡಲಿರುವ ತಂಡ ಇಂತಿದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್ ಧೋನಿ (ವಿಕೆಟ್ಕೀಪರ್), ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ.