ವಿರಾಟ್ ಕೊಹ್ಲಿಯನ್ನ ಡಕೌಟ್ ಮಾಡಿದ ಏಕೈಕ ಸ್ಪಿನ್ನರ್
ಮೂರನೇ ಏಕದಿನ ಪಂದ್ಯದಲ್ಲಿ ಕೇಶವ್ ಮಹಾರಾಜ್ ಮತ್ತೊಮ್ಮೆ ಅರ್ಧಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿದರು. ಕೇಶವ್ ಸ್ಪಿನ್ ಮೋಡಿಗೆ 65ರನ್ಗೆ ಕೊಹ್ಲಿ ಇನ್ನಿಂಗ್ಸ್ ಮುಗಿಸಿದ್ರು. ಈ ಪಂದ್ಯದಲ್ಲಿ ಗೆಲುವಿನ ಬಳಿಕ ಕೇಶವ್ ಮಹಾರಾಜ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ತಂಡದ ಗೆಲುವಿನ ಫೋಟೋಗಳ ಜೊತೆಗೆ ಅರ್ಥಪೂರ್ಣ ಮಾತುಗಳನ್ನ ಬರೆದುಕೊಂಡಿದ್ದರು.
ಜೈ ಶ್ರೀ ರಾಮ್ ಎಂದ ಕೇಶವ್ ಮಹಾರಾಜ್
"ಇದು ಎಂತಹ ಸರಣಿಯಾಗಿದೆ ಮತ್ತು ಈ ತಂಡದ ಬಗ್ಗೆ ಹೆಚ್ಚು ಹೆಮ್ಮೆಪಡುವಂತಾಗಿದ್ದು, ನಾವು ಎಷ್ಟು ದೂರ ಬಂದಿದ್ದೇವೆ, ರೀಚಾರ್ಜ್ ಆಗಲು ಮತ್ತು ಮುಂದಿನ ಸರಣಿಗಾಗಿ ತಯಾರಿ ಮಾಡುವ ಸಮಯ ಜೈ ಶ್ರೀ ರಾಮ್" ಎಂದು ಇನ್ಸ್ಟಾಗ್ರಾಮ್ನಲ್ಲಿ ಕೇಶವ್ ಮಹಾರಾಜ್ ಬರೆದುಕೊಂಡಿದ್ದಾರೆ.
ಕೇಶವ್ ಮಹಾರಾಜ್ ಹೀಗೆ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆಯಲು ಜಾಸ್ತಿ ಹೊತ್ತು ತಗುಲಲಿಲ್ಲ. ನೆಟ್ಟಿಗರು ಮಹಾರಾಜ್ ಬರೆದಿದ್ದ ಜೈ ಶ್ರೀ ರಾಮ್ ಪದಗಳ ಕುರಿತು ಅನೇಕರು ಹರ್ಷ ವ್ಯಕ್ತಪಡಿಸಿದ್ರು. ತಾನೆಲ್ಲೇ ವಾಸವಿದ್ರೂ ತನ್ನ ತಾಯ್ನಾಡಿನ ಬೇರನ್ನ ಮರೆತಿಲ್ಲ ಎಂದು ಹೊಗಳಿದ್ದಾರೆ. 31 ವರ್ಷದ ಭಾರತೀಯ ಮೂಲದ ಕ್ರಿಕೆಟಿಗ ಕೇಶವ್, ಹಲವು ವರ್ಷದಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಗಮನಾರ್ಹವಾಗಿ, ಮಹಾರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಬಯೋದಲ್ಲೂ ಕೂಡ "ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್" ಎಂದು ಬರೆದುಕೊಂಡಿದ್ದಾರೆ.
2016ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ
ಆಸ್ಟ್ರೇಲಿಯಾ ವಿರುದ್ಧ 2016ರಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕೇಶವ್ ಮಹಾರಾಜ್ ಇದುವರೆಗೂ 39 ಟೆಸ್ಟ ಪಂದ್ಯಗಳು 18 ಏಕದಿನ ಮತ್ತು 8 ಟಿ20 ಪಂದ್ಯಗಳನ್ನಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 130 ವಿಕೆಟ್, ಏಕದಿನ ಕ್ರಿಕೆಟ್ನಲ್ಲಿ 22 ವಿಕೆಟ್, ಹಾಗೂ ಟಿ20 ಕ್ರಿಕೆಟ್ನಲ್ಲಿ 6 ವಿಕೆಟ್ಗಳನ್ನ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಧಾರವಾಗಿದ್ದಾರೆ. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕೇಶವ್ ಟೆಸ್ಟ್ನಲ್ಲಿ ಮೂರು ಅರ್ಧಶತಕ ಸಹಿತ 805 ರನ್ ಕಲೆಹಾಕಿದ್ದಾರೆ.