ವಿಶ್ರಾಂತಿಯೇ ಅವರ ಗಾಯದ ಸಮಸ್ಯೆಗೆ ಔಷಧ
"ಬುಮ್ರಾಗೆ ವಿಶ್ರಾಂತಿಯ ಅಗತ್ಯವಿದೆ ಏಕೆಂದರೆ ಅದು ಬೆನ್ನುನೋವಿಗೆ ಅತ್ಯುತ್ತಮ ಔಷಧವಾಗಿದೆ. ಸದ್ಯಕ್ಕೆ ಅವರು ಎನ್ಸಿಎ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿರುತ್ತಾರೆ." ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಿತಿನ್ ನೇರವಾಗಿ ಬುಮ್ರಾ ಚೇತರಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಾವು ಅವರನ್ನು ವಿಶ್ವಕಪ್ನಿಂದ ಸಂಪೂರ್ಣವಾಗಿ ಹೊರಗಿಡುವುದಿಲ್ಲ. ಅವರು ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಾರೆ ಮತ್ತು ಅಲ್ಲಿ ತಮ್ಮ ಚೇತರಿಕೆ ಮುಂದುವರಿಸುತ್ತಾರೆ. ಬದಲಾವಣೆಗಳನ್ನು ಮಾಡಲು ನಮಗೆ ಅಕ್ಟೋಬರ್ 15 ರವರೆಗೆ ಸಮಯವಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಆಡಿದ್ದು ಗಾಯಕ್ಕೆ ಕಾರಣ
ಬುಮ್ರಾ ಈ ಹಿಂದೆ ಸ್ಪಿಯರ್ಹೆಡ್ ಗಾಯದ ತೊಂದರೆಗಳನ್ನು ಹೊಂದಿದ್ದು, ಇದು 2018 ಕ್ಕೆ ಅವರ ಟೆಸ್ಟ್ ಚೊಚ್ಚಲ ಪಂದ್ಯವನ್ನು ವಿಳಂಬಗೊಳಿಸಿತು. ಅವರಿಗೆ ಹಳೆಯ ಬೆನ್ನಿನ ಗಾಯ ಪುನರಾವರ್ತನೆಯಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾಗವಹಿಸಿದ್ದು, ಗಾಯದ ಸಮಸ್ಯೆ ಹೆಚ್ಚಾಗಲು ಕಾರಣವಾಯಿತು.
ಸ್ಕ್ಯಾನ್ ವರದಿಗಳು ಇನ್ನೂ ಟೀಂ ಇಂಡಿಯಾ ಪಾಲಿಗೆ ಆಶಾದಾಯಕಾವಾಗಿದೆ. ವಿಶ್ವಕಪ್ನ ಕೆಲವು ಪಂದ್ಯಗಳಿಗೆ ಅವರು ಫಿಟ್ ಆಗುವ ಅವಕಾಶ ಇನ್ನೂ ಇದೆ. ಬುಮ್ರಾ ಟೀಂ ಇಂಡಿಯಾ ಜೊತೆಗಿದ್ದು, ಚೇತರಿಕೆ ಮುಂದುವರಿಸಲಿದ್ದಾರೆ. 2019 ರಲ್ಲಿ ಬಿಸಿಸಿಐ ಸಣ್ಣ ಗಾಯ ಎಂದು ಹೇಳಿದಾಗ ಬುಮ್ರಾ ಸುಮಾರು ಐದು ತಿಂಗಳು ವಿಶ್ರಾಂತಿ ಪಡೆದಿದ್ದರು. ರವೀಂದ್ರ ಜಡೇಜಾ ಈಗಾಗಲೇ ಗಾಯಗೊಂಡು ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಈಗ ಬುಮ್ರಾ ಕೂಡ ಆಡದೇ ಇರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.
ಅ.15ರವರೆಗೆ ಬದಲಾವಣೆ ಮಾಡಲು ಅವಕಾಶ
ಬಿಸಿಸಿಐ ಅಕ್ಟೋಬರ್ 9 ರೊಳಗೆ ಗಾಯವನ್ನು ಲೆಕ್ಕಿಸದೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಐಸಿಸಿ ಅನುಮತಿ ನೀಡಿದರೆ ಅಕ್ಟೋಬರ್ 15 ರವರೆಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಲು ಅವರಿಗೆ ಇನ್ನೂ ಆರು ದಿನಗಳ ಅವಕಾಶವಿದೆ.
ಭಾರತ ತಂಡದ ಜೊತೆ ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಕೂಡ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಒಂದು ವೇಳೆ, ಭಾರತ ತಂಡದಲ್ಲಿ ಬದಲಾವಣೆಗಳನ್ನು ಮಾಡಬೇಕಾದರೆ ಮತ್ತು ಬುಮ್ರಾ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟರೆ, ಅಕ್ಟೋಬರ್ 15 ರೊಳಗೆ ಬದಲಿ ಆಟಗಾರರನ್ನು ಹೆಸರಿಸಬೇಕಾಗುತ್ತದೆ.
"ರಿಸರ್ವ್ನಲ್ಲಿ ಹೆಸರಿಸಲಾದ ಆಟಗಾರರಲ್ಲದೆ ಸಿರಾಜ್, ಶಮಿ ಮತ್ತು ದೀಪಕ್ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ನಾವು ಕ್ಯಾಂಪ್ ಮಾಡುವಾಗ ಅವರು ಬ್ರಿಸ್ಬೇನ್ನಲ್ಲಿ ಚೇತರಿಸಿಕೊಳ್ಳುವುದನ್ನು ಮುಂದುವರಿಸುತ್ತಾರೆ. ಜಸ್ಪ್ರೀತ್ ಉತ್ತಮಗೊಂಡರೆ, ಅವರು ತಂಡದಲ್ಲಿ ಉಳಿಯುತ್ತಾರೆ. ಇಲ್ಲದಿದ್ದರೆ, ನಾವು ಬದಲಿ ಆಟಗಾರನನ್ನು ಹೆಸರಿಸಬೇಕಾಗುತ್ತದೆ. ಸದ್ಯಕ್ಕೆ, ಅವರು ಗಾಯದ ಆತಂಕವನ್ನು ಹೊಂದಿದ್ದಾರೆ ಆದರೆ ಸಂಪೂರ್ಣವಾಗಿ ಟಿ20 ಟೂರ್ನಿಯಿಂದ ಹೊರ ಹೋಗಿಲ್ಲ" ಎಂದು ಅಧಿಕಾರಿ ತಿಳಿಸಿದರು.
ಐಸಿಸಿ ಟಿ20 ವಿಶ್ವಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.