ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಶುರುವಾಗಿ ಸ್ವಲ್ಪ ದಿನಗಳಲ್ಲಿ ಮುಂದೂಡಲ್ಪಟ್ಟಿತ್ತು. ಭಾರತದಲ್ಲಿ ಆತಂಕ ರೀತಿಯಲ್ಲಿ ಹೆಚ್ಚಾಗುತ್ತಿದ್ದ ಕೋವಿಡ್-19 ಪ್ರಕರಣಗಳಿಂದಾಗಿ ನಗದು ಶ್ರೀಮಂತ ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.
ಕೊರೊನಾ ವಿರುದ್ಧದ ಹೋರಾಟಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ ಸನ್ ರೈಸರ್ಸ್
ಮುಖ್ಯವಾಗಿ ಐಪಿಎಲ್ ಬಯೋಬಬಲ್ ಒಳಗೆ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಐಪಿಎಲ್ ನಿಲ್ಲಿಸುವ ಅನಿವಾರ್ಯತೆಗೆ ಬಿಸಿಸಿಐ ಸಿಲುಕಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್ನ ಅಮಿತ್ ಮಿಶ್ರಾ, ಸನ್ ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ ಸಾಹಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಐಪಿಎಲ್ ಅಮಾನತುಗೊಳಿಸಲಾಯ್ತು.
ಐಪಿಎಲ್ ಅಮಾನತಾದ ಬಳಿಕವೂ ಕೋಲ್ಕತ್ತಾ ನೈಟ್ ರೈಡರ್ಸ್ನಲ್ಲಿ ನ್ಯೂಜಿಲೆಂಡ್ ಆಟಗಾರ ಟಿಮ್ ಸೀಫರ್ಟ್, ಪ್ರಸಿದ್ಧ್ ಕೃಷ್ಣ, ಸಿಎಸ್ಕೆಯ ಸಿಇಒ ಕಾಸಿ ವಿಶ್ವನಾಥ ಅವರಿಗೂ ಕೊರೊನಾ ತಾಗಿತ್ತು. ಭಾರತದಲ್ಲಿ ಇಷ್ಟರವರೆಗೆ ಕೊರೊನಾ ಭೀತಿಯಿದ್ದರೂ ಮಂಬೈ ಇಂಡಿಯನ್ಸ್ನಲ್ಲಿ ಆಡುವ ನ್ಯೂಜಿಲೆಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಮತ್ತೆ ಐಪಿಎಲ್ ಆಡಲು ಸಿದ್ಧ ಎಂದಿದ್ದಾರೆ.
ಪಿಯೂಷ್ ಚಾವ್ಲಾ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಕೊರೊನಾ ವೈರಸ್ಗೆ ಬಲಿ
'ಐಪಿಎಲ್ ಬಗ್ಗೆ ಅರಿತುಕೊಂಡೇ ನಾನು ಒಪ್ಪಂದ ಮಾಡಿಕೊಂಡಿದ್ದೇನೆ. ನಾನು ಐಪಿಎಲ್ನಲ್ಲಿ ಆಡುವ ಬದ್ಧತೆ ಹೊಂದಿದ್ದೆ. ಐಪಿಎಲ್ ಅಮಾನತಾಗುವ ಮುಂದಲು ಐಪಿಎಲ್ ತೊರೆಯುವ ಆಲೋಚನೆ ಮಾಡಿರಲಿಲ್ಲ,' ಎಂದು ಜಿಮ್ಮಿ ನೀಶಮ್ ಹೇಳಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ 29 ಪಂದ್ಯಗಳು ನಡೆದಿದ್ದು, 31 ಪಂದ್ಯಗಳು ಬಾಕಿ ಉಳಿದಿವೆ.