ರಾಜ್ ದೀಪ್ ಕೂಡಾ ಕ್ರಿಕೆಟರ್ ಆಗಿದ್ದರು
ವಿಶ್ವವಿದ್ಯಾಲಯದ ಅಂಡರ್ 19 ಕ್ರಿಕೆಟರ್ ಕೂಡಾ ಆಗಿದ್ದ ರಾಜ್ ದೀಪ್ ಅವರಿಗೆ ಸಹಜವಾಗಿ ಕ್ರಿಕೆಟ್ ಬಗ್ಗೆ ಆಸಕ್ತಿ ಇದ್ದೆ ಇದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಸರ್ದೇಸಾಯಿ ಅವರು ಸದ್ಯ ಇಂಡಿಯಾ ಟುಡೇಯ ಕನ್ಸಲ್ಟಿಂಗ್ ಎಡಿಟರ್ ಆಗಿದ್ದಾರೆ.
|
ನಿಮ್ಮ ಬೆಂಬಲ ಬೇಕು ಎಂದಿದ್ದ ರಾಜದೀಪ್
ಪುಸ್ತಕದ ಬಗ್ಗೆ ಟ್ವೀಟ್ ಮಾಡಿ ನಿಮ್ಮ ಬೆಂಬಲ ಬೇಕು ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.
|
90ರ ದಶಕದಲ್ಲಿ ಕ್ರಿಕೆಟರ್ ಗಳ ವರಮಾನ
90ರ ದಶಕದಲ್ಲಿ ಕ್ರಿಕೆಟರ್ ಗಳ ವರಮಾನ ವಿವರ ಲಭ್ಯವಿದೆ. ಟೆಸ್ಟ್ ಆಟಗಾರರರಿಗೆ ದಿನವೊಂದಕ್ಕೆ 10 ಸಾವಿರ ರು ಲಭಿಸುತ್ತಿತ್ತು.
|
ಧೋನಿ ಅವರ ಬಗ್ಗೆ ಮಾಹಿತಿ
ಧೋನಿ ಬಗ್ಗೆ ಈಗಾಗಲೇ ಸಿನಿಮಾ ಬಂದಿದೆ. ಆರಂಭದ ದಿನಗಳಲ್ಲಿ ಪೂರ್ವ ವಲಯದ ಪರ ಧೋನಿ ಅವರು ಆಡಲಾಗಲಿಲ್ಲ ಏಕೆ? ಎಂಬುದು ಈಗಾಗಲೇ ಅಭಿಮಾನಿಗಳಿಗೆ ಗೊತ್ತಾಗಿದೆ. ಇದು ಇಲ್ಲಿ ವಿವರವಾಗಿ ಲಭ್ಯವಿದೆ.
|
ಪುಸ್ತಕದ ಹೆಸರಿಗೆ ಆಕ್ಷೇಪ
ಮೋದಿ ಹಾಗೂ ಹಿಂದೂಗಳ ವಿರುದ್ಧ ಹಲವು ಬಾರಿ ದನಿಯೆತ್ತಿರುವ ರಾಜ್ ದೀಪ್ ಅವರ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಪುಸ್ತಕದ ಶೀರ್ಷಿಕೆಯಲ್ಲಿ ಪ್ರಜಾಪ್ರಭುತ್ವ ಎಂದು ಬಳಸಿ 11 ಜನ ಮಾತ್ರ ಇರುವಂತೆ ಮಾಡಿದ್ದೀರಿ ಅದು ಹೇಗೆ ಎಂದು ಪ್ರಶ್ನಿಸಿದ್ದಾರೆ.