ಕಪಿಲ್ ಹೇಳಿದ ಮೊದಲ ಆಲ್ರೌಂಡರ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ದೇವ್ ಅವರಲ್ಲಿ ಪ್ರಸ್ತುತ ಆಟಗಾರರ ಪೈಕಿ ನೆಚ್ಚಿನ ಆಲ್ರೌಂಡರ್ಗಳು ಯಾರು ಎಂಬ ಪ್ರಶ್ನೆ ಕೇಳಿದಾಗ ಅವರು ಉತ್ತರವನ್ನು ನೀಡಿದ್ದಾರೆ. ನಾನು ಕ್ರಿಕೆಟ್ಅನ್ನು ಈಗ ಕೇವಲ ಆನಂದವನ್ನು ಅನುಭವಿಸುವುದಕ್ಕಾಗಿ ಮಾತ್ರವೇ ನೋಡುತ್ತೇನೆ. ನಾನು ನೀವು ಹೇಳಿದ ದೃಷ್ಟಿಕೋನದಿಂದ ನೋಡುವುದಿಲ್ಲ. ನನ್ನ ಕೆಲಸ ಆಟವನ್ನು ಆನಂದಿಸುವುದು. ಆದರೆ ನಾನು ಆರ್ ಅಶ್ವಿನ್ ಅವರನ್ನು ಹೇಳಬಲ್ಲೆ. ಆತನಿಗೆ ಹ್ಯಾಟ್ಸ್ಆಫ್" ಎಂದಿದ್ದಾರೆ ಕಪಿಲ್ ದೇವ್
ಜಡೇಜಾ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ ಕಪಿಲ್
ಮಾಜಿ ನಾಯಕ ಕಪಿಲ್ದೇವ್ ಆರ್ ಅಶ್ವಿನ್ ಅವರನ್ನು ಹೆಸರಿಸಿದ ಬಳಿಕ ರವೀಂದ್ರ ಜಡೃಜಾ ಅವರು ಕೂಡ ತನ್ನ ನೆಚ್ಚಿನ ಆಲ್ರೌಂಡರ್ ಎಂದಿದ್ದಾರೆ. "ಜಡೇಜಾ ಕೂಡ.. ಆತನೋರ್ವ ಎಂತಾ ಅದ್ಭುತವಾದ ಕ್ರಿಕೆಟರ್. ಆದರೆ ದುರದೃಷ್ಟವಶಾತ್ ಆತ ಬ್ಯಾಟರ್ಆಗಿ ಉತ್ತಮ ಪ್ರಹತಿ ಕಂಡಿದ್ದರೂ ಬೌಲರ್ ಆಗಿ ಕೆಳಮುಖ ಕಂಡಿದ್ದಾರೆ. ಆತ ಆರಂಭದ ದಿನಗಳಲ್ಲಿ ತುಂಬಾ ಉತ್ತಮವಾದ ಬೌಲರ್ ಆಗಿದ್ದರು. ಆದರೆ ಈಗ ಆತ ಉತ್ತಮವಾದ ಬ್ಯಾಟರ್ ಆಗಿದ್ದಾರೆ. ಪ್ರತೀ ಬಾರಿಯೂ ತಂಡ ಆತನನ್ನು ಬಯಸುತ್ತದೆ ಹಾಗೂ ಅದಕ್ಕೆ ಪೂರಕವಾಗಿ ಆತ ಉತ್ತಮವಾಗಿ ರನ್ಗಳಿಸುತ್ತಾರೆ. ಆದರೆ ಬೌಲರ್ ಆಗಿ ಆತನಿಂದ ಉತ್ತಮ ಪ್ರದರ್ಶನ ಬರುತ್ತಿಲ್ಲ" ಎಂದಿದ್ದಾರೆ ಕಪಿಲ್ದೇವ್.
ನೂತನ ಕೋಚ್ ಬಗ್ಗೆ ಕಪಿಲ್ದೇವ್ ಹೇಳಿದ್ದೇನು?
ಇನ್ನು ಒದೇ ಸಂದರ್ಭದಲ್ಲಿ ದಿಗ್ಗಜ ಆಟಗಾರ ಕಪಿಲ್ದೇವ್ ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಬಗ್ಗೆಯೂ ಮಾತನಾಡಿದ್ದಾರೆ. ರಾಹುಲ್ ದ್ರಾವಿಡ್ ತನ್ನ ಹೊಸ ಜವಾಬ್ಧಾರಿಯಲ್ಲಿ ಹೆಚ್ಚು ಯಶಸ್ಸು ಗಳಿಸುತ್ತಾರೆ ಎಂದಿದ್ದಾರೆ ಕಪಿಲ್ದೇವ್. ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ನಲ್ಲಿ 16 ವರ್ಷಗಳ ಕಾಲ ಬ್ಯಾಟರ್ ಆಗಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಕೋಚ್ ಹುದ್ದೆಯಲ್ಲಿ ಪಡೆಯಲಿದ್ದಾರೆ ಎಂದು ಕಪಿಲ್ ದೇವ್ ಭವಿಷ್ಯ ನುಡಿದಿದ್ದಾರೆ.
ದ್ರಾವಿಡ್ ಏನು ಸಾಧಿಸುತ್ತಾರೆ ಅನ್ನೋದು ನಾವು ನೋಡಲಿದ್ದೇವೆ
ಆತನೋರ್ವ ಅತ್ಯುತ್ತಮ ವ್ಯಕ್ತಿ ಮತ್ತು ಉತ್ತಮ ಕ್ರಿಕೆಟಿಗ. ಆತ ಕ್ರಿಕೆಟರ್ ಆಗಿದ್ದಕ್ಕಿಂತಲೂ ಅತ್ಯುತ್ತಮವಾಗಿ ಕೋಚ್ ಆಗಿ ಕಾರ್ಯ ನಿರ್ವಹಿಸಬಲ್ಲರು. ಯಾಕೆಂದರೆ ಕ್ರಿಕೆಟ್ನಲ್ಲಿ ಆತನಿಗಿಂತ ಉತ್ತಮವಾಗಿ ಈ ಹುದ್ದೆಯನ್ನು ಯಾರು ಕೂಡ ನಿರ್ವಹಿಸಲು ಸಾಧ್ಯವಿಲ್ಲ. ಆತನ ಪದಾರ್ಪಣೆಯ ತಕ್ಷಣವೇ ಇದನ್ನು ನೀವು ನಿರ್ಣಯಿಸಲು ಸಾಧ್ಯವಿಲ್ಲ. ಒಂದು ಪ್ರದರ್ಶನದ ಆಧಾರದ ಮೇಲೆ ನೀವು ಹೋಗಲು ಸಾಧ್ಯವಿಲ್ಲ. ಒಂದು ಅವಧಿಯಲ್ಲಿ ರಾಹುಲ್ ದ್ರಾವಿಡ್ ಏನು ಸಾಧಿಸಲಿದ್ದಾರೆ ಎಂಬುದನ್ನು ನಾವೆಲ್ಲಾ ನೋಡಲಿದ್ದೇವೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕಪಿಲ್ದೇವ್