ನವದೆಹಲಿ, ಅಕ್ಟೋಬರ್ 2: ಬಿಸಿಸಿಐ ನೈತಿಕ ಅಧಿಕಾರಿ ಡಿಕೆ ಜೈನ್ ಅವರಿಂದ ಹಿತಾಸಕ್ತಿ ಸಂಘರ್ಷ ಕುರಿತ ನೋಟಿಸ್ ಬಂದ ಕೂಡಲೇ, ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದಾಗ ನಾಯಕರಾಗಿದ್ದ ಕಪಿಲ್ ದೇವ್, ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ರಾಜೀನಾಮೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಐಪಿಎಲ್ ಹರಾಜು ದಿನಾಂಕ, ಸ್ಥಳ ನಿಗದಿ: ಬೆಂಗಳೂರಿಗೆ ತಪ್ಪಿದ ಅವಕಾಶ
ಕ್ರಿಕೆಟ್ ಅಡ್ವೈಸರಿ ಕಮಿಟಿಯಲ್ಲಿದ್ದ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಹಿತಾಸಕ್ತಿ ಸಂಘರ್ಷ ಸಂಬಂಧಿ ನೋಟಿಸ್ ನೀಡಲಾಗಿತ್ತು. ಇದರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೆಲ ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದರು.
ತ್ರಿಕೋನ ಸರಣಿ: ಅಂತಾರಾಷ್ಟ್ರೀಯ ಟಿ20 ಇತಿಹಾಸ ಬರೆದ ಸಿಂಗಾಪುರ!
'ಸಿಎಸಿಯಲ್ಲಿ ಮುಂದಾಳುವಾಗಿದ್ದಕ್ಕೆ ಅದರಲ್ಲೂ ಪುರುಷರ ತಂಡಕ್ಕೆ ಮುಖ್ಯ ಕೋಚ್ ಆರಿಸುವ ಹೊಣೆಗಾರಿಕೆ ದೊರೆತಿದ್ದಕ್ಕೆ ಖುಷಿಯಾಗಿದೆ. ನಾನು ಈಗಿಂದೀಗಲೇ ಸಿಎಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ,' ಎಂದು ಕಪಿಲ್, ಸಿಒಎ ಮುಖ್ಯಸ್ಥ ವಿನೋದ್ ರಾಯ್, ಬಿಸಿಸಿಐ ಮುಖ್ಯಸ್ಥ ರಾಹುಲ್ ಜೋಹ್ರಿಗೆ ಮಾಡಿರುವ ಮೇಲ್ನಲ್ಲಿ ಬರೆದುಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಹೇಳಿದೆ.
ದಾಖಲೆಗಾಗಿ ಕೊಹ್ಲಿ ಜೊತೆ ಸೇರಿದ ಪಾಕ್ ಕ್ರಿಕೆಟರ್ ಬಾಬರ್ ಅಝಾಮ್
ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನ (ಎಂಪಿಸಿಎ) ಜೀವಮಾನದ ಸದಸ್ಯ ಸಂಜೀವ್ ಗುಪ್ತಾ, ಎಸಿಎಯಲ್ಲಿದ್ದ ಕಪಿಲ್, ಗಾಯಕ್ವಾಡ್ ಮತ್ತು ರಂಗಸ್ವಾಮಿ ವಿರುದ್ಧ ದೂರು ನೀಡಿದ್ದರು. ಕಪಿಲ್ ದೇವ್ ಫ್ಲಡ್ಲೈಟ್ ಕಂಪನಿ ಮಾಲಕರಾಗಿದ್ದಾರೆ, ಜೊತೆಗೆ ಇಂಡಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಮತ್ತು ಕ್ರಿಕೆಟರ್ ಅಡ್ವೈಸರಿ ಸಮಿತಿಯ ಸದಸ್ಯರಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.