ಬೆಂಗಳೂರು, ಡಿಸೆಂಬರ್ 6: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಲೀಗ್ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ, ಶಿವಮೊಗ್ಗ ಲಯನ್ಸ್ ವಿರುದ್ಧ ಅಜೇಯ 134 ರನ್ ಮತ್ತು 15 ರನ್ಗೆ 8 ವಿಕೆಟ್ ಪಡೆದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದ ಕರ್ನಾಟಕ ತಂಡದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
ಅರ್ಚನಾ ಸುಂದರ್ ಒಂದಿಗೆ ಗೌತಮ್ ಶುಕ್ರವಾರ (ಡಿಸೆಂಬರ್ 6) ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಬದಲಾಗಿದ್ದಾರೆ. ನವ ವಧು-ವರರಿಗೆ ಕರ್ನಾಟಕ ರಣಜಿ ತಂಡ ಅಧಿಕೃತ ಟ್ವಿಟರ್ ಖಾತೆ ಶುಭ ಕೋರಿದೆ. ಡಿಸೆಂಬರ್ 2ರಂದು ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮದುವೆ ಬಂಧನಕ್ಕೆ ಒಳಗಾಗಿದ್ದರು.
Krishnappa Gowtham (@gowthamyadav88) and Archana Sundar got married today. We wish them all the very best for beginning of a long, happy life together. ವಿವಾಹದ ಹಾರ್ದಿಕ ಶುಭಾಶಯಗಳು, ಭಜ್ಜಿ ಮತ್ತು ಅರ್ಚನ ಅವರಿಗೆ.
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) December 6, 2019
[PC: @rayane_mithun] pic.twitter.com/CHbnXRrm8C
ಈ ಬಾರಿಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ಗೌತಮ್ಗೆ ಬ್ಯಾಟಿಂಗ್ಗೆ ಅವಕಾಶ ಲಭಿಸದಿದ್ದರೂ, ಬೌಲಿಂಗ್ನಲ್ಲಿ 31 ರನ್ಗೆ 1 ವಿಕೆಟ್ ಕೆಡವಿದ್ದರು.
ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆ
31ರ ಹರೆಯದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್, 2018ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು. ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಗೌತಮ್, ರಾಯಲ್ಸ್ಗೆ ಬದಲಾಗಿ ಕಿಂಗ್ಸ್ XI ಪಂಜಾಬ್ ಪರ ಆಡುತ್ತಿದ್ದಾರೆ. ಒಟ್ಟು 17 ಐಪಿಎಲ್ ಇನ್ನಿಂಗ್ಸ್ಗಳಲ್ಲಿ ಗೌತಮ್ 144 ರನ್, 22 ಇನ್ನಿಂಗ್ಸ್ಗಳಲ್ಲಿ 12 ವಿಕೆಟ್ ಪಡೆದಿದ್ದಾರೆ.