ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Karnataka announces ranji team for semi final against Bengal

ಬೆಂಗಳೂರು, ಫೆಬ್ರವರಿ 24: ಫೆಬ್ರವರಿ 29ರ ಶನಿವಾರ ನಡೆಯಲಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕಾಗಿ ಕರ್ನಾಟಕ ರಾಜ್ಯ ತಂಡ ಪ್ರಕಟಗೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ರಣಜಿ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬೆಂಗಾಲ್ ವಿರುದ್ಧ ಕಾದಾಡಲಿದೆ.

ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ 167 ರನ್ ಜಯ ಗಳಿಸಿ ಸತತ 3ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಅತ್ತ ಬೆಂಗಾಲ್ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಒಡಿಶಾ ವಿರುದ್ಧ ಪಂದ್ಯ ಡ್ರಾ ಮಾಡಿಕೊಂಡಿತ್ತಾದರೂ ಮೊದಲ ಇನ್ನಿಂಗ್ಸ್‌ನ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಶನಿವಾರ ನಡೆಯುವ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ಮತ್ತು ಸೌರಾಷ್ಟ್ರ ತಂಡಗಳು ಸ್ಪರ್ಧಿಸಲಿವೆ. ಫೈನಲ್ ಪಂದ್ಯ ಮಾರ್ಚ್ 9ರಂದು ಆರಂಭಗೊಳ್ಳಲಿದೆ. ಸೆಮಿಫೈನಲ್‌ಗಾಗಿ ಕೆಎಸ್‌ಸಿಎ ಪ್ರಕಟಿಸಿರುವ 15 ಜನರ ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಕೆಎಲ್ ರಾಹುಲ್ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

4 ಪಂದ್ಯ 4 ಸೋಲು: ಐಸಿಸಿ ಟೂರ್ನಿಗಳಲ್ಲಿ ಕೀವಿಸ್ ಕಂಡರೆ ಟೀಮ್ ಇಂಡಿಯಾಗೆ ಯಾಕೆ ಭಯ!4 ಪಂದ್ಯ 4 ಸೋಲು: ಐಸಿಸಿ ಟೂರ್ನಿಗಳಲ್ಲಿ ಕೀವಿಸ್ ಕಂಡರೆ ಟೀಮ್ ಇಂಡಿಯಾಗೆ ಯಾಕೆ ಭಯ!

ಕರ್ನಾಟಕ ತಂಡ: ಕರುಣ್ ನಾಯರ್ (ನಾಯಕ), ರವಿ ಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಕೆಎಲ್ ರಾಹುಲ್, ಶರತ್ ಶ್ರೀನಿವಾಸ್ (ವಿಕೆ), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ಸಿದ್ಧಾರ್ಥ್ ಕೆವಿ, ಪ್ರಸಿದ್ಧ್ ಕೃಷ್ಣ, ಜಗದೀಶ್ ಸುಚಿತ್, ಪ್ರತೀಕ್ ಜೈನ್, ರೋನಿತ್ ಮೋರೆ, ಶರತ್ ಬಿಆರ್ (ವಿಕೆ).

Story first published: Monday, February 24, 2020, 19:11 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X