ಸೆಮಿಫೈನಲ್ಸ್ ಬದಲಿಗೆ ಪ್ಲೇ ಆಫ್ಸ್ ಪರಿಚಯ
ಈ ಬಾರಿಯೂ ಪ್ರಶಸ್ತಿ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸೆ.1ರಂದು ಮೈಸೂರಿನಲ್ಲಿ ನಡೆಯಲಿರುವ ಫೈನಲ್ನಲ್ಲಿ ಚಾಂಪಿಯನ್ ತಂಡ 10 ಲಕ್ಷ ರೂ. ಗಳಿಸಿದರೆ, ರನ್ನರ್ಅಪ್ ತಂಡ 5 ಲಕ್ಷ ರೂ. ಪಡೆಯಲಿದೆ. ಈ ಬಾರಿ ಎಲಿಮಿನೇಟರ್ ಕ್ವಾಲಿೈಯರ್ ಪಂದ್ಯವನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಐಪಿಎಲ್ ರೋಚಕತೆಯನ್ನು ಕೆಪಿಎಲ್ಗೂ ಕಲ್ಪಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಟೂರ್ನಿಯ ರಾಯಭಾರಿಯಾಗಿ ಮುಂದುವರಿದಿದ್ದಾರೆ. ಕೆಪಿಎಲ್ ವೇಳಾಪಟ್ಟಿ ಅನಾವರಣಗೊಳಿಸಿ ಮಾತನಾಡಿದ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರವಾದ್, "ರಾಜ್ಯದ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಲು ಕೆಪಿಎಲ್ ಉತ್ತಮ ವೇದಿಕೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಿಂದ ಹೆಚ್ಚಿನ ಆಟಗಾರರು ಐಪಿಎಲ್ನಲ್ಲಿ ಆಡುತ್ತಿರುವುದೇ ಇದಕ್ಕೆ ಸಾಕ್ಷಿ," ಎಂದರು. ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿದ್ದುಘಿ, ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭವಾದರೆ 2ನೇ ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ. ಸ್ಟಾರ್ಸ್ಪೋರ್ಟ್ಸ್ ಹಾಗೂ ಸುವರ್ಣ ಕನ್ನಡದಲ್ಲಿ ನೇರ ಪ್ರಸಾರ ಇರಲಿದೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
'ಎ' ಗುಂಪಿನ ಆಟಗಾರರು
ಹರಾಜಿಗೆ ಲಭ್ಯವಿರುವ 'ಎ' ಗುಂಪಿನ ಆಟಗಾರರು (ಅಭಿಮನ್ಯು ಮಿಥುನ್, ಅಭಿಷೇಕ್ ರೆಡ್ಡಿಘಿ, ಆದಿತ್ಯ ಸೋಮಣ್ಣ, ಅಮಿತ್ ವರ್ಮ, ಅನಿರುದ್ಧ ಜೋಶಿ, ದಿಕ್ಷಾಂಶು ನೇಗಿ, ಗೌತಮ್ ಕೆ, ಕರುಣ್ ನಾಯರ್, ಮನೀಶ್ ಪಾಂಡೆ, ಮೊಹಮ್ಮದ್ ತಾಹ, ಎಂ.ಜಿ. ನವೀನ್, ಪವನ್ ದೇಶಪಾಂಡೆ, ಟಿ.ಪ್ರದೀಪ್, ಪ್ರಸಿದ್ಧ್ ಕೃಷ್ಣಘಿ, ಪ್ರತೀಕ್ ಜೈನ್, ರಾಬಿನ್ ಉತ್ತಪ್ಪ, ರೋಹನ್ ಕದಮ್, ರೋನಿತ್ ಮೋರೆ, ಆರ್.ಸಮರ್ಥ್, ಬಿ.ಆರ್.ಶರತ್, ಶಿಶಿರ್ ಭವಾನೆ, ಶ್ರೇಯಸ್ ಗೋಪಾಲ್, ಕೆ.ವಿ.ಸಿದ್ಧಾರ್ಥ್, ಸ್ಟ್ಯಾಲಿನ್ ಹೂವರ್).
ಪಂದ್ಯಗಳ ವಿವರ
#09
ಉದ್ಘಾಟನಾ ಪಂದ್ಯ ಸೇರಿದಂತೆ ಆ.16ರಿಂದ 20ರವರೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳು
#07
ಆ.22ರಿಂದ 25ರವರೆಗೆ 2ನೇ ಚರಣ ಹುಬ್ಬಳ್ಳಿಯಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳು
#09
ಫೈನಲ್ ಪಂದ್ಯ ಸೇರಿದಂತೆ ಆ.27ರಿಂದ ಸೆ.1ರವರೆಗೆ 3ನೇ ಚರಣ ಮೈಸೂರಿನಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳು
2019ರ ಆವೃತ್ತಿಗೆ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು
ಬಿಜಾಪುರ ಬುಲ್ಸ್ (ಭರತ್ ಚಿಪ್ಲಿ, ಕಾರಿಯಪ್ಪ ಕೆ.ಸಿ)
ಮೈಸೂರು ವಾರಿಯರ್ಸ್ (ಜೆ.ಸುಜಿತ್, ವೈಶಾಖ್ ವಿ)
ಬಳ್ಳಾರಿ ಟಸ್ಕರ್ಸ್ (ಸಿ.ಎಂ.ಗೌತಮ್, ದೇವದತ್ ಪಡಿಕ್ಕಲ್)
ಬೆಳಗಾವಿ ಪ್ಯಾಂಥರ್ಸ್ (ಶುಭಾಂಗ್ ಹೆಗಡೆ, ಅವಿನಾಶ್ ಡಿ)
ಬೆಂಗಳೂರು ಬ್ಲಾಸ್ಟರ್ಸ್ (ಕೌಶಿಕ್ ವಿ, ಮನೋಜ್ ಭಾಂಡಗೆ)
ಶಿವಮೊಗ್ಗ ಲಯನ್ಸ್ (ನಿಹಾಲ್ ಉಲ್ಲಾಳ್, ಪೃಥ್ವಿರಾಜ್ ಶೇಖಾವತ್) ಹುಬ್ಬಳ್ಳಿ ಟೈಗರ್ಸ್ (ವಿನಯ್ ಕುಮಾರ್, ಪ್ರವೀಣ್ ದುಬೆ).