ತಿರುವನಂತಪುರಂ, ಅಕ್ಟೋಬರ್ 31: ದೇವರ ನಾಡೆಂಡು ಕರೆಯಲ್ಪಡುವ ಕೇರಳ, ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್ರವಾಹದಿಂದಾಗಿ ಕೇರಳ ಭಾಗಶಃ ಅಸ್ತವ್ಯಸ್ತಗೊಂಡಿತ್ತು. ಆದರೆ ಪ್ರವಾಸಿಗರು ಭೇಟಿ ಕೊಡುವುದಕ್ಕಾಗಿ ಕೇರಳ ಈಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ vs ವೆಸ್ಟ್ ಇಂಡೀಸ್ ಕೊನೆಯ ಪಂದ್ಯ: ಗೆದ್ದರೆ ಟ್ರೋಫಿ ಭಾರತದ ಮಡಿಲಿಗೆ
ಅಗಸ್ಟ್ ತಿಂಗಳಲ್ಲಿ ಕೇರಳ ರಾಜ್ಯವನ್ನು ಪ್ರವಾಹ ಕಾಡಿಸಿತ್ತು. ಹತ್ತಿರ 500 ಮಂದಿಯನ್ನು ಇದೇ ನೆರೆ ಹಾವಳಿ ಬಲಿ ತೆಗೆದುಕೊಂಡಿತ್ತು. ಸುಮಾರು ನೂರು ವರ್ಷಗಳ ಬಳಿಕ ಕಾಡಿದ್ದ ಈ ಭೀಕರ ಪ್ರವಾಹದಿಂದಾಗಿ ಇಡೀ ಕೇರಳವೇ ತತ್ತರಿಸಿತ್ತು. ಆದರೆ ಇದೀಗ ಕೇರಳ ಸಂಪೂರ್ಣ ಚೇತರಿಸಿಕೊಂಡಿದೆ. ಮತ್ತದೆ ಸೌಂದರ್ಯದ ತಾಣವಾಗಿ ಪ್ರವಾಸಿಗರನ್ನು ಕರೆಯತೊಡಗಿದೆ.
Virat Kohli hand writing 👌👌 pic.twitter.com/Y7zStj6elS
— Captain (@Virat4everr) October 31, 2018
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಕೇರಳದ ತಿರುವನಂತಪುರಕ್ಕೆ ತಲುಪಿದೆ. ಪ್ರವಾಹ ಭೀತಿಯನ್ನು ಹೋಗಲಾಡಿಸೋಕೆ ಕೊಹ್ಲಿ ಕೇರಳದ ಬಗ್ಗೆ ವಿಶೇಷ ಸೂಚನೆಯೊಂದನ್ನು ಬರೆದುಕೊಂಡಿದ್ದಾರೆ. 'ಭೇಟಿ ನೀಡುವುದಕ್ಕಾಗಿ ಕೇರಳ ಸಂಪೂರ್ಣ ಸುರಕ್ಷಿತವಾಗಿದೆ. ಇಲ್ಲಿಗೆ ಬರಲು ತುಂಬಾ ಖುಷಿಯೆನಿಸುತ್ತೆ' ಎಂದು ತನ್ನ ಕೈಯಾದರೆ ಚಂದದ ಸಾಲುಗಳನ್ನು ಕೊಹ್ಲಿ ಗೀಚಿದ್ದಾರೆ.
ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್
'ಕೇರಳದ ಸೌಂದರ್ಯವನ್ನು ಎಲ್ಲರೂ ಸವಿಯಬೇಕು. ಇಲ್ಲಿಗೆ ಮತ್ತೆ ಭೇಟಿ ಕೊಡುವುದಕ್ಕಾಗಿ ಈ ತಾಣ ಸಂಪೂರ್ಣ ಸುರಕ್ಷಿತವಾಗಿದೆ ಎಂದು ನಿಮ್ಮೆಲ್ಲರಿಗೂ ನಾನು ಶಿಫಾರಸು ಮಾಡುತ್ತೇನೆ' ಎಂದು ಕೊಹ್ಲಿ ಬರೆದಿರುವುದು ಜಾಲತಾಣಗಳಲ್ಲಿ ಓಡಾಡುತ್ತಿವೆ. 5ನೇ ಏಕದಿನ ಪಂದ್ಯ ತಿರುವನಂತಪುರಂನ ಗ್ರೀನ್ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 1) 1.30pmಗೆ ಆರಂಭಗೊಳ್ಳಲಿದೆ.