ಸೌರವ್ ಗಂಗೂಲಿ ಟ್ರೋಲ್
ಗಂಗೂಲಿ ಆಸ್ಪತ್ರೆಗೆ ದಾಖಲಾಗುತ್ತಲೇ ಸಾವಿರಾರು ಅಭಿಮಾನಿಗಳು ಗಂಗೂಲಿ ಬೇಗ ಚೇತರಿಸಿಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದರು. ಇನ್ನೂ ಕೆಲವರು ಶುಭ ಕೋರುತ್ತಲೇ ಗಂಗೂಲಿ ಕಾಲು ಎಳೆದಿದ್ದರು. ಭಾರತದ ಮಾಜಿ ಕ್ರಿಕೆಟರ್ ಕೀರ್ತಿ ಅಝಾದ್ ಕೂಡ ಗಂಗೂಲಿಗೆ ತರಲೆ ಮಾಡಿ ವಿಶ್ ಮಾಡಿದ್ದಾರೆ.
ಗಂಗೂಲಿ ಕಾಲೆಳೆಯಲು ಕಾರಣವಿದೆ
ನೆಟ್ಟಿಗರು ಗಂಗೂಲಿ ಕಾಲೆಳೆಯಲು ಕಾರಣವಿದೆ. ಹೃದಯಾಘಾತ ಸಂಭವಿಸುವ ಮುನ್ನ ಗಂಗೂಲಿ ಅವರು ಬಿಜೆಪಿ ಆಪ್ತ ಉದ್ಯಮಿ ಗೌತಮ್ ಅದಾನಿ ಒಡೆತನದ 'ಫಾರ್ಚ್ಯೂನ್' ಅಡುಗೆ ಎಣ್ಣೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ನಿಮ್ಮ ಹೃದಯದ ಆರೋಗ್ಯಕ್ಕೆ ಈ ಎಣ್ಣೆ ಬಳಸಿ ಎಂದು ಜಾಹೀರಾತಿನಲ್ಲಿ ಗಂಗೂಲಿ ನಟಿಸಿದ್ದರು. ಈಗ ಗಂಗೂಲಿಗೇ ಹೃದಯಾಘಾತವಾಗಿದ್ದರಿಂದ ತಮಾಷೆಗೂ ಎಡೆ ಮಾಡಿಕೊಟ್ಟಿದೆ.
|
ಪರೀಕ್ಷಿಸಿದ ಉತ್ಪನ್ನಗಳಿಗೆ ಪ್ರಚಾರ ನೀಡಿ
ಗಂಗೂಲಿಗೆ ತರ್ಲೆ ಮಾಡಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟರ್, ಸದ್ಯ ಕಾಂಗ್ರೆಸ್ ಸದಸ್ಯ ಆಗಿರುವ ಕೀರ್ತಿ ಅಝಾದ್, 'ದಾದಾ ಸೌರವ್ ಗಂಗೂಲಿ ಬೇಗ ಚೇತರಿಸಿಕೊಳ್ಳಿ. ಯಾವಾಗಲೂ ಪರೀಕ್ಷಿಸಿದ, ಪ್ರಾಯೋಗಿಸಿದ ಉತ್ಪನ್ನಗಳಿಗೆ ಪ್ರಚಾರ ನೀಡಿ. ಯಾವಾಗಲೂ ಎಚ್ಚರಿಕೆಯಾಗಿರಿ, ಜಾಗೃತರಾಗಿರಿ. ನಿಮ್ಮನ್ನು ದೇವರು ಆಶೀರ್ವದಿಸಲಿ' ಎಂದು ಬರೆದುಕೊಂಡಿದ್ದಾರೆ.
ವಿಶ್ವಕಪ್ ತಂಡದಲ್ಲಿದ್ದ ಅಝಾದ್
ಸ್ಪಿನ್ ಬೌಲರ್ ಆಗಿದ್ದ ಕೀರ್ತಿ ಅಝಾದ್ ಅವರು ಟೀಮ್ ಇಂಡಿಯಾ ಪರ 10 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 3 ವಿಕೆಟ್, 11 ಏಕದಿನ ಇನ್ನಿಂಗ್ಸ್ಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ, 1983ರಲ್ಲಿ ಭಾರತ ತಂಡ ಚೊಚ್ಚ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿ ಕೀರ್ತಿ ಅಝಾದ್ ಕೂಡ ಇದ್ದರು. ಅಂದ್ಹಾಗೆ, ಬಿಜೆಪಿಗೆ ಆಪ್ತವಾಗಿರುವ ಅದಾನಿಯ ಉತ್ಪನ್ನಗಳಿಗೆ ಕಣ್ಮುಚ್ಚಿ ಪ್ರಚಾರ ನೀಡಬೇಡಿ ಎಂಬರ್ಥದಲ್ಲಿ ಅಝಾದ್ ಅವರು ಗಂಗೂಲಿಯನ್ನು ಎಚ್ಚರಿಸಿದ್ದಾರೆ.