ಪರಿಗಣಿಸಲಿದ್ದೇವೆ
'ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಆಯ್ಕೆ ಸಮಿತಿ ಒಟ್ಟು ಸೇರಿಲ್ಲ. ನಾವು ಖಂಡಿತವಾಗಿಯೂ ರೋಹಿತ್ ಶರ್ಮಾ ಅವರನ್ನು ಆರಂಭಿಕರಾಗಿ ಇಳಿಸುವ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದೇವೆ. ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲ್ಲಿದ್ದೇವೆ,' ಎಂದು ಎಂಎಸ್ಕೆ ಪ್ರಸಾದ್ ಇಂಡಿಯಾ ಟುಡೇ ಜೊತೆ ಹೇಳಿಕೊಂಡಿದ್ದಾರೆ.
ನಿಜಕ್ಕೂ ಕಾಳಜಿಯಿದೆ
'ಕೆಎಲ್ ರಾಹುಲ್ ನಿಜಕ್ಕೂ ಪ್ರತಿಭಾನ್ವಿತ ಆಟಗಾರ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಸ್ವಲ್ಪ ಪರದಾಡುತ್ತಿದ್ದಾರೆ. ಅವರ ಫಾರ್ಮ್ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿದೆ. ಫಾರ್ಮ್ಗೆ ಬರಲು ಅವರು ವಿಕೆಟ್ ಕಾವಲು ಕಾಯಬೇಕು. ಆ ಮೂಲಕ ಫಾರ್ಮ್ಗೆ ಮರಳಬೇಕಿದೆ,' ಎಂದು ಪ್ರಸಾದ್ ಸೇರಿಸಿದರು. ವಿಂಡೀಸ್ 2 ಟೆಸ್ಟ್ಗಳಲ್ಲಿ ರಾಹುಲ್ ಕ್ರಮವಾಗಿ 44, 38, 13, 6 ರನ್ ಬಾರಿಸಿದ್ದರು.
ಗಂಗೂಲಿ ಸಲಹೆ
ಇದಕ್ಕೂ ಮುನ್ನ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ರೋಹಿತ್ಗೆ ಅವಕಾಶ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಾಹುಲ್ ಪರದಾಡುತ್ತಿರುವುದನ್ನು ಗಮನಿಸಿದ್ದ ಗಂಗೂಲಿ, ಆರಂಭಿಕರಾಗಿ ರಾಹುಲ್ ಬದಲು ರೋಹಿತ್ಗೆ ಅವಕಾಶ ನೀಡಬೇಕು ಎಂದು ಹೇಳಿದ್ದರು. ಗಂಗೂಲಿ ಸಲಹೆಯನ್ನು ಆಯ್ಕೆ ಸಮಿತಿ ಪರಿಗಣಿಸುವ ಸೂಚನೆ ದೊರೆತಿದೆ.
ಸೆಪ್ಟೆಂಬರ್ 15ರಿಂದ ಶುರು
ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿ ಸೆಪ್ಟೆಂಬರ್ 15ರಿಂದ 3 ಪಂದ್ಯಗಳ ಟಿ20 ಮೂಲಕ ಆರಂಭಗೊಳ್ಳಲಿದೆ. ಟಿ20 ಬಳಿಕ ಅಂದರೆ ಅಕ್ಟೋಬರ್ 2ರಿಂದ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಟಿ20 ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶುರುವಾದರೆ, ಟೆಸ್ಟ್ ಸರಣಿ ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿ ಚಾಲನೆಗೊಳ್ಳಲಿದೆ.