ಜಿಂಬಾಬ್ವೆ ವಿರುದ್ಧದ ಸರಣಿಗೆ ರಾಹುಲ್ ಕಂಬ್ಯಾಕ್ ಸಾಧ್ಯತೆ
ಕೆ.ಎಲ್ ರಾಹುಲ್ ವಿಂಡೀಸ್ ವಿರುದ್ಧದ ಸರಣಿಗೆ ಮಿಸ್ ಆದಲ್ಲಿ, ನಂತರದಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ 18, 20, 22ರಂದು ಹರಾರೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲಿದ್ದಾರೆ.
ರಾಹುಲ್ ಇತ್ತೀಚೆಗಷ್ಟೇ ಜರ್ಮನಿಯಿಂದ ಶಸ್ತ್ರಚಿಕಿತ್ಸೆ ಬಳಿಕ ಬೆಂಗಳೂರಿಗೆ ಮರಳಿದ್ದರು. ಜೊತೆಗೆ ಎನ್ಸಿಎನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರ ಕುರಿತಾಗಿ ಸಾಕಷ್ಟು ಫೋಟೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಆದ್ರೆ ವಿಂಡೀಸ್ ಪ್ರವಾಸಕ್ಕೂ ಮುನ್ನ ಕೋವಿಡ್-19 ಪಾಸಿಟಿವ್ಗೆ ತುತ್ತಾದ ಪರಿಣಾಮ ಐಸೋಲೇಷನ್ಗೆ ಒಳಪಟ್ಟರು.
ಚೆಸ್ ಒಲಿಂಪಿಯಾಡ್ 2022: ಚೆನ್ನೈನಲ್ಲಿ ಭರ್ಜರಿ ತಯಾರಿ, 61 ದೇಶಗಳಲ್ಲಿ ಭಾರತ ನನ್ನ ಫೇವರಿಟ್ ಎಂದ ವಿದೇಶಿ ಪ್ಲೇಯರ್
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವನ್ನ ಮುನ್ನಡೆಸುವ ಅವಕಾಶ ಕೈ ತಪ್ಪಿತು
ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್, ಐಪಿಎಲ್ ನಂತರ ಗಾಯಗೊಂಡು ಜರ್ಮನಿಯಲ್ಲಿ ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ನಾಯಕತ್ವವನ್ನು ವಹಿಸಿಕೊಂಡರು. ಹಾರ್ದಿಕ್ ಪಾಂಡ್ಯ ಐರ್ಲೆಂಡ್ನಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸಿದರು.
ಇದರ ನಂತರ ವಿಂಡೀಸ್ ವಿರುದ್ಧದ ಸರಣಿಗೆ ಫಿಟ್ನೆಸ್ ಟೆಸ್ಟ್ ಕೂಡ ಪಾಸ್ ಆಗಿದ್ದ ಕೆ.ಎಲ್ ರಾಹುಲ್ಗೆ ಕೋವಿಡ್ ಕಾರಣದಿಂದ ಕೆರಿಬಿಯನ್ ಸರಣಿಯನ್ನೂ ಕಳೆದುಕೊಂಡಿರುವುದು ನಿಜಕ್ಕೂ ಬೇಸರ ತರಿಸಿದೆ.
ಕಾಮನ್ವೆಲ್ತ್ ಗೇಮ್ಸ್ 2022 ಉದ್ಘಾಟನಾ ಸಮಾರಂಭದ ಸಮಯವೇನು? ಭಾರತದಲ್ಲಿ ಯಾವ ಸಮಯಕ್ಕೆ ಲೈವ್?
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್
ಜುಲೈ 29ರಂದು ಮೊದಲ ಟಿ20 ಪಂದ್ಯಕ್ಕೆ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂ ಆತಿಥ್ಯ ವಹಿಸಿದೆ. ಮೊದಲ ಪಂದ್ಯದ ಬಳಿಕ ಸೈಂಟ್ ಕಿಟ್ಸ್ಗೆ ಎರಡೂ ತಂಡಗಳು ತೆರಳಲಿದ್ದು, ಎರಡು ಮತ್ತು ಮೂರನೇ ಟಿ20 ಪಂದ್ಯದಲ್ಲಿ ಆಡಲಿವೆ. ಆಗಸ್ಟ್ 1 ಮತ್ತು 2ರಂದು ಎರಡು ಮತ್ತು ಮೂರನೇ ಪಂದ್ಯಗಳ ಬಳಿಕ ಅಂತಿಮ ಎರಡು ಪಂದ್ಯಗಳು ಫ್ಲೋರಿಡಾ (ಯುಎಸ್ಎ)ದಲ್ಲಿ ನಡೆಯಲಿದೆ.
ಟೀಂ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್ (ಆಡುವುದು ಅನುಮಾನ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಕುಲದೀಪ್ ಯಾದವ್, ರವಿ ಬಿಷ್ಣೋಯ್.