ನವದೆಹಲಿ, ಆಗಸ್ಟ್ 11: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ ಅಂತಾರಾಷ್ಟ್ರೀಯ ಅಂಪೈರ್ಗಳ ಸಮಿತಿಗೆ ಭಾರತೀಯ ಅಂಪೈರ್ ಕೆಎನ್ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಮತ್ತೊಬ್ಬ ಭಾರತೀಯ ಅಂಪೈರ್ ನಿತಿನ್ ಮೆನನ್ ಎಲೈಟ್ ಪ್ಯಾನೆಲ್ಗೆ ಬಡ್ತಿ ಪಡೆದ ನಂತರ ಅನಂತಪದ್ಮನಾಭನ್ ಐಸಿಸಿ ಪ್ಯಾನೆಲ್ಗೆ ಆರಿಸಲ್ಪಟ್ಟಿದ್ದಾರೆ.
ಸಿಪಿಎಲ್ 2020: ಈ ಬಾರಿಯ ಸಿಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯ
ಕೇರಳದ ಮಾಜಿ ಸ್ಪಿನ್ನರ್ ಆಗಿರುವ ಕೆಎನ್ ಅನಂತಪದ್ಮನಾಭನ್ ಅವರು ಅಂತಾರಾಷ್ಟ್ರೀಯ ಪ್ಯಾನೆಲ್ನಲ್ಲರುವ ಇನ್ನಿತರ ಭಾರತೀಯರಾದ ಸಿ ಸಂಶುದ್ದೀನ್, ಅನಿಲ್ ಚೌಧರಿ, ವೀರೇಂದರ್ ಶರ್ಮಾ ಅವರ ತಂಡವನ್ನು ಸೇರಿಕೊಂಡಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್: ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು
50ರ ಹರೆಯದ ಅನಂತಪದ್ಮನಾಧನ್ ಇನ್ಮುಂದೆ ಜೂನಿಯರ್ ವಿಶ್ವಕಪ್ ಹೊರತಾಗಿ ಏಕದಿನ ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಅಂಪೈರಿಂಗ್ ಮಾಡಲು ಅರ್ಹರಾಗಿದ್ದಾರೆ. ಈ ಮೊದಲು ಅನಂತಪದ್ಮನಾಭನ್ ಅವರು ಐಪಿಎಲ್ ಸೇರಿ ಪ್ರಮುಖ ದೇಸಿ ಕ್ರಿಕೆಟ್ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು.
ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್ಗೆ 'ಪತಂಜಲಿ' ಆಸಕ್ತಿ
ಹಿಂದಿನ ರಣಜಿ ಟ್ರೋಫಿ ಫೈನಲ್ ವೇಳೆ ಅಂಪೈರಿಂಗ್ ಮಾಡುತ್ತಿದ್ದ ಸಂಶುದ್ದೀನ್ ಗಾಯಗೊಂಡಿದ್ದರು. ಬೆಂಗಾಲ್ ಮತ್ತು ಸೌರಾಷ್ಟ್ರ ನಡುವಿನ ಈ ಫೈನಲ್ ಪಂದ್ಯದಲ್ಲಿ ಅನಂತಪದ್ಮನಾಭನ್ ಅಂಪೈರ್ ಜವಾಬ್ದಾರಿ ನಿರ್ವಹಿಸಿದ್ದರು. 'ಈ ಜವಾಬ್ದಾರಿಯನ್ನು ನೀಡುವ ಮೂಲಕ ಬಿಸಿಸಿಐ ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಾನು ನಿಜವಾಗಿಯೂ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ,' ಎಂದು ಅನಂತ್ ಖುಷಿ ವ್ಯಕ್ತಪಡಿಸಿದ್ದಾರೆ.