ಮೈಸೂರು, ಸೆಪ್ಟೆಂಬರ್ 5: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 20 ರನ್ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಫೈನಲ್ ಪ್ರವೇಶಿಸಿದೆ.
ಲ್ಯಾನ್ಸ್ ಕ್ಲುಸ್ನರ್ : ದೆಹಲಿ ರಣಜಿ ತಂಡಕ್ಕೆ ಸಲಹೆಗಾರ ಕಮ್ ಕೋಚ್
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಬೆಂಗಳೂರು 20 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 138 ರನ್ ಪೇರಿಸಿತ್ತು. ಮನೋಜ್ ಭಂಡಾಜೆ 34, ನಾಯಕ ರಾಬಿನ್ ಉತ್ತಪ್ಪ 23, ಕೆಬಿ ಪವನ್ 19 ರನ್ ಸೇರಿಸಿ ತಂಡಕ್ಕೆ ತಕ್ಕ ಮಟ್ಟಿನ ಬೆಂಬಲ ನೀಡಿದರು.
Congratulations Shreyas Gopal! #NammaKPL #KPL2018 #BisiBisiCrickettu #BengaluruVsMysuru pic.twitter.com/ASAK4iMYxM
— Namma KPL (@KPLKSCA) September 4, 2018
ಚೇಸಿಂಗ್ ಗೆ ಇಳಿದ ಮೈಸೂರು ಅರ್ಜುನ್ ಹೊಯ್ಸಳ ಅವರ ಆಕರ್ಷಕ ಅರ್ಧ ಶತಕ (52/42)ದ ಹೊರತಾಗಿಯೂ ಸೋಲನುಭವಿಸಿತು. 20 ಓವರ್ ಗಳಲ್ಲಿ ಮೈಸೂರು 9 ವಿಕೆಟ್ ಕಳೆದು 118 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಮೈಸೂರಿನ ಉಳಿದ ಬ್ಯಾಟ್ಸ್ಮನ್ ಗಳು 14 ರನ್ ಗೆರೆ ದಾಟಿಸದಿದ್ದುದು ಸೋಲಿಗೆ ಕಾರಣವಾಯ್ತು.
13 ರನ್ನಿಗೆ ಮೈಸೂರಿನ 3 ವಿಕೆಟ್ ಕಿತ್ತ ಬೆಂಗಳೂರು ಬೌಲರ್ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.