ಬೆಂಗಳೂರು, ಆಗಸ್ಟ್ 14:ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಆಗಸ್ಟ್ 15) ಸಂಜೆ ಮಳೆ ಕಾರಣ ಕೊಂಚ ತಡವಾಗಿ ಬಿಸಿ ಬಿಸಿ ಕ್ರಿಕೆಟ್ ಆರಂಭವಾಗಿದೆ. ಬೆಂಗಳೂರು ಬ್ಲಾಸ್ಟರ್ಸ್ ತಂಡವು ಶುಭಾರಂಭ ಮಾಡಿದೆ.
ಮೈಖೇಲ್ ನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಕದನದ ವರದಿ ತಪ್ಪದೇ ಓದಿ...
ಕೆಪಿಎಲ್ 2018 : ಸಂಪೂರ್ಣ ವೇಳಾಪಟ್ಟಿ, ಟಿವಿ ಪ್ರಸಾರ ಸಮಯ
ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 06 ರ ತನಕ ನಡೆಯಲಿದೆ.
ಕೆಪಿಎಲ್ 2018: ಯಾರ್ಯಾರು ಯಾವ ತಂಡಕ್ಕೆ?
ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಗೆ ಟಾಸ್ ಸೋತರೂ ಮೊದಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದೆ ಮಳೆ ಕಾರಣ ತಡವಾಗಿ ಕೆಪಿಎಲ್ 2018 ಉದ್ಘಾಟನಾ ಪಂದ್ಯ ಆರಂಭವಾಗಿದೆ.
ಪಂದ್ಯದ ಮುನ್ನೋಟ ತಪ್ಪದೇ ಓದಿ
ಬೆಂಗಳೂರು ಬ್ಲಾಸ್ಟರ್ಸ್: ಅಭಿಶೇಕ್ ಭಟ್, ಆನಂದ್ ದೊಡ್ಡಮನಿ, ಪವನ್ ದೇಶಪಾಂಡೆ, ಮನೋಶ್ ಭಾಂಡಗೆ,ವಿಶ್ವನಾಥ್ ಎಂ, ಚೇತನ್ ವಿಲಿಯಮ್ಸ್, ರಾಬಿನ್ ಉತ್ತಪ್ಪ, ಅರ್ಷ್ ದೀಪ್ ಬ್ರಾರ್, ಕೌಶಿಕ್ ವಿ, ಮಿತ್ರಕಾಂತ್ ಯಾದವ್, ಕೆಬಿ ಪವನ್
ಬೆಳಗಾವಿ ಪ್ಯಾಂಥರ್ಸ್: ಸೌರವ್ ಯಾದವ್, ಅವಿನಾಶ್ ಡಿ, ಅಕ್ಷಯ್ ಬಲ್ಲಾಳ್, ಸ್ಟುವರ್ಟ್ ಬಿನ್ನಿ, ದಿಕ್ಷಾಂಕು ನೇಗಿ, ಶರತ್, ನಿದೀಶ್ ಎಂ, ಸ್ಟಾಲಿನ್, ಸಾದಿಕ್, ಶುಭಾಂಗ್ ಹೆಗ್ಡೆ, ರಕ್ಷಿತ್ ಎಸ್
ಹಾಲಿ ಚಾಂಪಿಯನ್ ಬೆಳಗಾವಿಗೆ ಮುಖಭಂಗ, ಬೆಂಗಳೂರಿಗೆ ಭರ್ಜರಿ ಜಯ
229 ರನ್ ಗುರಿ ಬೆನ್ನು ಹತ್ತಿದ ಬೆಳಗಾವಿ 20 ಓವರ್ ಗಳಲ್ಲಿ 161/8 ಮಾತ್ರ ಗಳಿಸಿ ಸೋಲೊಪ್ಪಿಕೊಂಡಿದೆ.
15 ಓವರ್ ಗಳ ನಂತರ ಬೆಳಗಾವಿ 123/6, ಟಾರ್ಗೆಟ್ 229
25 ಎಸೆತಗಳಲ್ಲಿ 49ರನ್ ಗಳಿಸಿ ಶರತ್ ಔಟ್, ಆನಂದ್ ದೊಡ್ಡಮನಿಗೆ ಮತ್ತೊಂದು ವಿಕೆಟ್, ಬೆಳಗಾವಿ 102/5.
11 ಓವರ್ ಗಳ ನಂತರ ಬೆಳಗಾವಿ ಪ್ಯಾಂಥರ್ಸ್ 92/4, ಶರತ್ ಭರ್ಜರಿ ಬ್ಯಾಟಿಂಗ್
6.2ಓವರ್ ಗಳಲ್ಲಿ 42/3 ಗಳಿಸಿರುವ ಬೆಳಗಾವಿ ಪ್ಯಾಂಥರ್ಸ್. ಕ್ರೀಸ್ ನಲ್ಲಿ ಸ್ಟುವರ್ಟ್ ಬಿನ್ನಿ, ಶರತ್
6 ಓವರ್ ಗಳ ನಂತರ ಬೆಳಗಾವಿ ಪ್ಯಾಂಥರ್ಸ್ 40/2 ಸಾದಿಕ್ ಕಿರ್ಮಾನಿ ಔಟ್
ಶೂನ್ಯ ಸುತ್ತಿ ಸ್ಟಾಲಿನ್ ಹೂವರ್ ಔಟ್, ಬೆಳಗಾವಿಗೆ ಪ್ಯಾಂಥರ್ಸ್ ಗೆ ಆಘಾತ
ಬೆಂಗಳೂರು ಬ್ಲಾಸ್ಟರ್ಸ್ ನಿಂದ ಶುಭಾರಂಭ, ಮೊದಲ ಓವರ್ ನಂತರ 1 ರನ್ನಿಗೆ 1 ವಿಕೆಟ್
ಬೆಳಗಾವಿ ಪ್ಯಾಂಥರ್ಸ್ ಗೆ ಗೆಲ್ಲಲು 229ರನ್ ಗುರಿ ನೀಡಿದ ಬೆಂಗಳೂರು ಬ್ಲಾಸ್ಟರ್ಸ್
20 ಓವರ್ ಗಳಲ್ಲಿ 228/5ಸ್ಕೋರ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್
30 ಎಸೆತಗಳಲ್ಲಿ 46ರನ್ ಗಳಿಸಿ ಪವನ್ ದೇಶಪಾಂಡೆ ಔಟ್! ಬಿನ್ನಿ ಬೌಲಿಂಗ್ ನಲ್ಲಿ ಶುಭಾಂಗ್ ಗೆ ಕ್ಯಾಚಿತ್ತ ಪವನ್
18 ಓವರ್ ಗಳಲ್ಲಿ 203ರನ್ ಗಳಿಸಿದ ಬೆಂಗಳೂರು ಬ್ಲಾಸ್ಟರ್ಸ್
ಅರ್ಷ್ ದೀಪ್ ಬ್ರಾರ್ 7 ಎಸೆತಗಳಲ್ಲಿ 13ರನ್ ಗಳಿಸಿ ಔಟ್
17 ಓವರ್ ಗಳ ನಂತರ ಬೆಂಗಳೂರು ಬ್ಲಾಸ್ಟರ್ಸ್ 193/4, ಪವನ್ ದೇಶಪಾಂಡೆ 37ರನ್(24)
ಕೆಪಿಎಲ್ 2018ರಲ್ಲಿ ಉತ್ತಮ ಆರಂಭ ಪಡೆದ ರಾಬಿನ್ ಉತ್ತಪ್ಪ ಆಕರ್ಷಕ ಅರ್ಧಶತಕ
And Robin Uthappa's spell has been broken, well played. Wicket by Stuart Binny and caught by Stallin Hoover! #KPL2018 #NammaKPL #BisiBisiCrickettu #BengaluruVsBelagavi pic.twitter.com/L5LbgZ9U5k
— Namma KPL (@KPLKSCA) August 15, 2018
16 ಓವರ್ ಗಳ ನಂತರ ಬೆಂಗಳೂರು ಬ್ಲಾಸ್ಟರ್ಸ್ 180/3 ಪವನ್ ದೇಶಪಾಂಡೆ 36(23)
37 ಎಸೆತಗಳಲ್ಲಿ 87 ರನ್ ಸಿಡಿಸಿ ಬೆಂಗಳೂರು ನಾಯಕ ರಾಬಿನ್ ಉತ್ತಪ್ಪ ಔಟ್!
11 ಓವರ್ ಗಳ ನಂತರ ಬೆಂಗಳೂರು ಬ್ಲಾಸ್ಟರ್ಸ್ 118/2, ರಾಬಿನ್ ಉತ್ತಪ್ಪ 51(26)
46ರನ್ ಗಳಿಸಿದ ವಿಶ್ವನಾಥ್ ಔಟ್! ದಿಕ್ಷಾಂಕು ಸ್ಪಿನ್ ಬಲೆಗೆ ಬಿದ್ದು ಎಲ್ ಬಿ ಆದ ವಿಶ್ವನಾಥ್, ಬೆಂಗಳೂರು 96/2
ಪವರ್ ಪ್ಲೇ ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 6 ಓವರ್ ಗಳ ನಂತರ...
Powerplay update! #KPL2018 #NammaKPL #BisiBisiCrickettu #BengaluruVsBelagavi pic.twitter.com/UtTDJcszm5
— Namma KPL (@KPLKSCA) August 15, 2018
ಮಳೆ ನಡುವೆ ತಾಳ್ಮೆಯಿಂದ ಕಾದಿದ್ದ ಪ್ರೇಕ್ಷಕರಿಗೆ ರನ್ ಮಳೆ ಕೊಡುಗೆ ನೀಡುತ್ತಿರುವ ಬೆಂಗಳೂರು ಬ್ಲಾಸ್ಟರ್ಸ್
#BengaluruVsBelagavi #NammaKPL #BisiBisiCrikettu #KPL2018 pic.twitter.com/68z2kqKp44
— Namma KPL (@KPLKSCA) August 15, 2018
ಮೊದಲ 5 ಓವರ್ ಗಳ ನಂತರ ಬೆಂಗಳೂರು ಬ್ಲಾಸ್ಟರ್ಸ್ 50/1, ವಿಶ್ವನಾಥ್ ಹಾಗೂ ಉತ್ತಪ್ಪ ಕ್ರೀಸ್ ನಲ್ಲಿದ್ದಾರೆ
ಕೆಪಿಎಲ್ 2018ರ ಮೊದಲ ಸಿಕ್ಸರ್ ಬಾರಿಸಿದ ಬೆಳಗಾವಿಯ ಅವಿನಾಶ್ ಎಸೆತದಲ್ಲಿ ಬೆಂಗಳೂರಿನ ವಿಶ್ವನಾಥ್
ಕೆಪಿಎಲ್ 2018ರ ಮೊದಲ ವಿಕೆಟ್ ಪಡೆದ ಬೆಳಗಾವಿ ನಾಯಕ ಸ್ಟುವರ್ಟ್ ಬಿನ್ನಿ; ಕೆಪಿಎಲ್ 2018ರ ಮೊದಲ ಬೌಂಡರಿ ಬಾರಿಸಿದ ಕೆಬಿ ಪವನ್
ಕೆಪಿಎಲ್ 2018 ಮೊದಲ ಓವರ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ ನಾಯಕ ಸ್ಟುವರ್ಟ್ ಬಿನ್ನಿ
ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಲಯನ್ಸ್ ಹಾಗ್ ಬೆಂಗಳೂರು ಬ್ಲಾಸ್ಟರ್ಸ್. ಒಟ್ಟು 7 ತಂಡಗಳು 19.5 ಎಂಚು ಎತ್ತರದ ಆಕರ್ಷಕ ಟ್ರೋಫಿಗಾಗಿ ಕಾದಾಡಲಿವೆ.
ಕೆಪಿಎಲ್ ಪಂದ್ಯಾವಳಿ ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರವಾಗುತ್ತದೆ
ಕೆಪಿಎಲ್ 2018ರ ಉದ್ಘಾಟನಾ ಪಂದ್ಯಕ್ಕೆ ವೀರಗಾಸೆ ನೃತ್ಯದ ಮೆರುಗು
#BengaluruVsBelagavi #NammaKPL #BisiBisiCrikettu #KPL2018 pic.twitter.com/fPdUfiiIt6
— Namma KPL (@KPLKSCA) August 15, 2018
ಟಾಸ್ ವರದಿ: ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ನ ನಾಯಕ ಸ್ಟುವರ್ಟ್ ಬಿನ್ನಿ ಅವರು ಟಾಸ್ ಗೆದ್ದು, ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವಂತೆ ಕೋರಿದರು.
ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ. ನಂತರ ಆಗಸ್ಟ್ 19ರಂದು ಹುಬ್ಬಳ್ಳಿಗೆ ಆನಂತರ 29ರಂದು ಮೈಸೂರಿಗೆ ಈ ಟೂರ್ನಿ ತೆರಳಲಿದೆ.