ಟಿಕೆಟ್ ದರ ನಿರ್ಧಾರವಾಗಿಲ್ಲ
ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ದರ ನಿರ್ಧಾರವಾಗಿದ್ದು, ಆನ್ಲೈನ್ನಲ್ಲಿ ಟಿಕೆಟ್ ಗಳು ಲಭ್ಯವಿದೆ. ಮೈಸೂರಿನಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ದರ ನಿರ್ಧಾರವಾಗಿಲ್ಲ. ಬೆಂಗಳೂರಿನ ಪಂದ್ಯಗಳ ಟಿಕೆಟ್ ಗೆ 5 ರೂ.ನಿಂದ 1000 ಹಾಗೂ ಹುಬ್ಬಳ್ಳಿಯ ಪಂದ್ಯಗಳಿಗೆ 50 ರಿಂದ 300ರೂ ವರೆಗೆ ದರ ನಿಗದಿಪಡಿಸಲಾಗಿದೆ. ಮೈಸೂರಿನಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ದರವನ್ನು ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಕೆಎಸ್ ಸಿಎ ಮೈಸೂರು ವಲಯ ನಿಯಂತ್ರಕ ಎಸ್.ಬಾಲಚಂದರ್ ತಿಳಿಸಿದರು.
ಮೈಸೂರು ವಾರಿಯರ್ಸ್ ನಾಯಕ ಸುಚಿತ್
ಇತ್ತ ಆಲ್ ರೌಂಡರ್ ಜೆ.ಸುಚಿತ್ ಅವರನ್ನು ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ನೇಮಿಸಲಾಗಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ತಂಡವನ್ನು ಕರುಣ್ ನಾಯರ್ ಮುನ್ನಡೆಸಿದ್ದರು. ಈ ಸಲದ ಟೂರ್ನಿಗೆ ಕರುಣ್ ಲಭ್ಯರಿಲ್ಲ. ಇದರಿಂದ ನಾಯಕತ್ವದ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬ ಕುತೂಹಲವಿತ್ತು. ಎಡಗೈ ಸ್ಪಿನ್ನರ್ ಆಗಿರುವ ಸುಚಿತ್ ಕೆಳಗಿನ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ‘ಪರ್ಪಲ್ ಕ್ಯಾಪ್'ಪಡೆದಿದ್ದರಲ್ಲದೆ, 13 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು. ಸುಚಿತ್ ಅವರು ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ.
ಪಂದ್ಯಗಳ ವೇಳಾಪಟ್ಟಿ
ಆ. 28: ಮೈಸೂರು ವಾರಿಯರ್ಸ್-ಶಿವಮೊಗ್ಗ ಲಯನ್ಸ್ (ಆರಂಭ ಸಂಜೆ 6.30).
ಆ. 29: ಶಿವಮೊಗ್ಗ ಲಯನ್ಸ್-ಬೆಳಗಾವಿ ಪ್ಯಾಂಥರ್ಸ್ (ಸಂಜೆ 6.30).
ಸೆ. 1: ಮೈಸೂರು ವಾರಿಯರ್ಸ್-ಬೆಳಗಾವಿ ಪ್ಯಾಂಥರ್ಸ್ (ಆರಂಭ ಮಧ್ಯಾಹ್ನ 2.00) ಹುಬ್ಬಳ್ಳಿ ಟೈಗರ್ಸ್- ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 6.30).
ಸೆ. 2: ಶಿವಮೊಗ್ಗ ಲಯನ್ಸ್- ಬಿಜಾಪುರ ಬುಲ್ಸ್ (ಮಧ್ಯಾಹ್ನ 2.00); ಬೆಂಗಳೂರು ಬ್ಲಾಸ್ಟರ್ಸ್- ಮೈಸೂರು ವಾರಿಯರ್ಸ್ (ಸಂಜೆ 6.30).
ಸೆ. 3: ಬಳ್ಳಾರಿ ಟಸ್ಕರ್ಸ್- ಶಿವಮೊಗ್ಗ ಲಯನ್ಸ್ (ಸಂಜೆ 6.30) ಸೆ. 4: ಮೊದಲ ಸೆಮಿಫೈನಲ್,
ಸೆ.5: ಎರಡನೇ ಸೆಮಿಫೈನಲ್, ಸೆ.6: ಫೈನಲ್ (ಎಲ್ಲ ಪಂದ್ಯಗಳು ಸಂಜೆ 6.30 ಕ್ಕೆ ಆರಂಭವಾಗಲಿವೆ)
ಮೆಂಟರ್ ಆಗಿ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್
ಮೈಸೂರು ವಾರಿಯರ್ಸ್ ತಂಡದ ಮೆಂಟರ್ ಆಗಿ ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಾರಿಯರ್ಸ್ ಮಾಲೀಕ ಎನ್ ಆರ್ ಸಮೂಹವು ಇಂದು ಕರ್ನಾಟಕ ಪ್ರೀಮಿಯರ್ ಲೀಗ್ 2018ರ ತಂಡವನ್ನು ಪರಿಚಯಿಸಿದೆ. ಈ ಬಾರಿಯ ಆವೃತ್ತಿಗೆ ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ಇಬ್ಬರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ ತಂಡಕ್ಕೆ ವಿವಿಧ ಕಂಪನಿಗಳು ಪ್ರಾಯೋಜಕತ್ವ ವಹಿಸಿವೆ.
ನೂತನ ತಂಡ ಹೀಗಿದೆ
ಅಮಿತ್ ವರ್ಮಾ, ಕೆ.ಗೌತಮ್, ಜೆ. ಸುಚಿತ್(ನಾಯಕ), ರಾಜೂ ಭಟ್ಕಳ, ಬಿ.ಎನ್ ಭರತ್, ಎಸ್.ಪಿ ಮಂಜುನಾಥ್, ಶೋಯೆಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ ಸಿದ್ಧಾರ್ಥ್, ಪ್ರತಿಕ್ ಜೈನ್, ವೈಶಾಕ್ ವಿಜಯ್ ಕುಮಾರ್, ಶರತ್ ಶ್ರೀನಿವಾಸ್, ಮನೋಜ್ ಕೆ.ಎಚ್, ಕುಶಾಲ್ ವಾಧ್ವಾನಿ, ಲವ್ನಿತ್ ಸಿಸೋಡಿಯಾ, ವಿನಯ್ ಸಾಗರ್, ಕಿಶನ್ ಬೆಡಾರೆ, ಗೌತಮ್ ಸಾಗರ್.