ಮೈಸೂರು, ಆಗಸ್ಟ್ 26: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂನಲ್ಲಿ ಭಾನುವಾರ (ಆಗಸ್ಟ್ 25) ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ 17ನೇ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 9 ವಿಕೆಟ್ ಸುಲಭ ಜಯ ಗಳಿಸಿದೆ. ಇದು ವಾರಿಯರ್ಸ್ಗೆ ಟೂರ್ನಿಯಲ್ಲಿ ಲಭಿಸಿದ ಮೊದಲ ಗೆಲುವು.
ಸ್ಟೋಕ್ಸ್ ಸಾಹಸ, ಸೋಲೋ ಪಂದ್ಯವನ್ನು ಪವಾಡ ರೀತೀಲಿ ಗೆದ್ದ ಇಂಗ್ಲೆಂಡ್!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹುಬ್ಳಿ ಟೈಗರ್ಸ್, ಪವನ್ ದೂಬೆ 52, ಲವನಿತ್ ಸಿಸೋಡಿಯಾ 29 ರನ್ ನೊಂದಿಗೆ 20 ಓವರ್ಗೆ 8 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತು. ತಂಡದ ಉಳಿಯ ಯಾವುದೇ ಬ್ಯಾಟ್ಸ್ಮನ್ 20ಕ್ಕೂ ಹೆಚ್ಚು ರನ್ ಗಳಿಸದಿದ್ದುದು ಸೋಲಿಗೆ ಕಾರಣವಾಯ್ತು.
ವರ್ಲ್ಡ್ ಚಾಂಪಿಯನ್ಷಿಪ್: ಬಂಗಾರ ಗೆದ್ದು ಇತಿಹಾಸ ಬರೆದ ಪಿವಿ ಸಿಂಧು
ಅಲ್ಲದೆ ಹುಬ್ಳಿ ಇನ್ನಿಂಗ್ಸ್ನಲ್ಲಿ ವಾರಿಯರ್ಸ್ನ ರಾಮ್ ಸಾರಿಕ್ ಯಾದವ್, ವ್ಯಾಶಕ್ ವಿಜಯ್ ಕುಮಾರ್ ಮತ್ತು ವೆಂಕಟೇಶ್ ಮುರಳೀಧರ ತಲಾ 2 ವಿಕೆಟ್ ಪಡೆದು ಎದುರಾಳಿಯನ್ನು ಕಾಡಿದರು. ಚೇಸಿಂಗ್ಗೆ ಇಳಿದ ಮೈಸೂರು ವಾರಿಯರ್ಸ್ನಿಂದ ವಿನಯ್ ಸಾಗರ್ 51, ಕೃಷ್ಣಮೂರ್ತಿ ಸಿದ್ಧಾರ್ಥ್ ಅಜೇಯ 48, ಅನಿರುದ್ಧ್ ಜೋಶಿ ಅಜೇಯ 46 ರನ್ ಸೇರಿಸಿದರು.
ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್
ವಾರಿಯರ್ಸ್, 16 ಓವರ್ಗೆ 1 ವಿಕೆಟ್ ಕಳೆದು 154 ರನ್ ಕಲೆ ಹಾಕಿ ವಿಜಯೋತ್ಸವ ಆಚರಿಸಿತು. ಈ ಪಂದ್ಯದ ಬಳಿಕ ಕೆಪಿಎಲ್ ಅಂಕಪಟ್ಟಿಯಲ್ಲಿ ಬಳ್ಳಾರಿ ಟಸ್ಕರ್ಸ್, ಶಿವಮೊಗ್ಗ ಲಯನ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಕ್ರಮವಾಗಿ ಅಗ್ರ ಮೂರು ಸ್ಥಾನಗಳಲ್ಲಿದ್ದವು.