ಕೊಲಂಬೋ: ಕನ್ನಡಿಗ ಕೃಪ್ಣಪ್ಪ ಗೌತಮ್ ಶ್ರೀಲಂಕಾ-ಭಾರತ ತೃತೀಯ ಏಕದಿನ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಈ ವೇಳೆ ಗೌತಮ್ ಅದ್ಭುತ ಕ್ಯಾಚ್ಗಾಗಿ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ ಇಬ್ಬರು ಆಟಗಾರರನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್
ಪಂದ್ಯದಲ್ಲಿ ಕೆ ಗೌತಮ್ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಲಂಕಾ ಬ್ಯಾಟ್ಸ್ಮನ್ ಭಾನುಕಾ ರಾಜಪಕ್ಸ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದಾರೆ. ಅಷ್ಟೇ ಅಲ್ಲ, ಗೌತಮ್ ಪ್ರಯತ್ನದಿಂದ ಭಾರತದ ಯುವ ಬೌಲರ್ ಚೇತನ್ ಸಕಾರಿಯಾಗೆ ಏಕದಿನ ಚೊಚ್ಚಲ ವಿಕೆಟ್ ಕೂಡ ಲಭಿಸಲು ಸಾಧ್ಯವಾಯ್ತು.
ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದಿಂದ ಈ ಮೂವರು ಆಟಗಾರರು ಔಟ್, ಬದಲಿ ಆಟಗಾರರ ಸೇರ್ಪಡೆ
ಭಾರತ ನೀಡಿದ್ದ 226 ರನ್ ಗುರಿಯನ್ನು ಬೆನ್ನಟ್ಟಿದ್ದ ಶ್ರೀಲಂಕಾ ಪರ ಭಾನುಕ ರಾಜಪಕ್ಸ ಅರ್ಧ ಶತಕ ಬಾರಿಸಿದ್ದರು. ಆರಂಭದಲ್ಲಿ ಚೇತನ್ ಸಕಾರಿಯಾ ಓವರ್ನಲ್ಲಿ ರಾಜಪಕ್ಸ ಅವರ ಕ್ಯಾಚನ್ನು ನಿತೀಶ್ ರಾಣಾ ಕೈ ಚೆಲ್ಲಿದ್ದರು. ಆದರೆ ಎರಡನೇ ಬಾರಿಗೆ ಕೆ ಗೌತಮ್ ರಾಜಪಕ್ಸ ಅವರ ಕ್ಯಾಚನ್ನೇ ಅದ್ಭುತ ರೀತಿಯಲ್ಲಿ ಪೂರ್ಣಗೊಳಿಸಿದ್ದರು.
Lucky before but not again! Gowtham takes a sliding catch to gift Sakariya his Maiden international wicket! ☝🏽
— Sony Sports (@SonySportsIndia) July 23, 2021
Tune into Sony Six (ENG), Sony Ten 1 (ENG), Sony Ten 3 (HIN), Sony Ten 4 (TAM, TEL) & SonyLIV now! 📺#SLvINDOnlyOnSonyTen #HungerToWin #ChetanSakariya pic.twitter.com/h06YcRaW3S
ಸಕಾರಿಯಾ ಅವರ 22.6ನೇ ಓವರ್ನಲ್ಲಿ ರಾಜಪಕ್ಸ ಬೌಂಡರಿ ಗೆರೆಯಾಚೆ ಚೆಂಡು ಅಟ್ಟಿದ್ದರು. ಕ್ಯಾಚ್ ಸಾಧ್ಯತೆ ಅರಿತು ಓಡಿ ಬಂದ ಗೌತಮ್ ಕ್ಯಾಚನ್ನು ಜಾರಿಕೊಂಡೇ ಹೋಗಿ ಹಿಡಿದುಕೊಂಡಿದ್ದರು. ಹೀಗಾಗಿ ರಾಜಪಕ್ಸ 65 ರನ್ಗೆ ಪೆವಿಲಿಯನ್ ಕಡೆಗೆ ನಡೆಯಬೇಕಾಗಿ ಬಂತು. ಇತ್ತ ಸಕಾರಿಯಾಗೆ ಚೊಚ್ಚಲ ಏಕದಿನ ವಿಕೆಟ್ ಕೂಡ ಲಭಿಸಿತು.