ಶ್ರೀಲಂಕಾ ವಿರುದ್ಧದ ಪಂದ್ಯ
ಅದು 2017ರ ಡಿಸೆಂಬರ್ನಲ್ಲಿ ಇಂದೋರ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯ. ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ನಡೆಸುತ್ತಿದ್ದ ಧೋನಿ ತಾಳ್ಮೆಯನ್ನು ಕಳೆದುಕೊಂಡು ಬೌಲಿಂಗ್ ಮಾಡುತ್ತಿದ್ದ ಕುಲ್ದೀಪ್ ಯಾದವ್ ಅವರ ಮೇಲೆ ಕೂಗಾಡಿದ್ದರು.
ಧೋನಿ ಮಾತು ಕೇಳಿಸಿಕೊಳ್ಳದ ಕುಲ್ದೀಪ್
ತಾನು ಬೌಲಿಂಗ್ ಮಾಡುತ್ತಿದ್ದಾಗ ಶ್ರೀಲಂಕಾ ಕ್ರಿಕೆಟಿಗ ಕುಸಲ್ ಪೆರೆರ ಬೌಂಡರಿಯನ್ನು ಬಾರಿಸಿದ್ದರು, ಈ ಸಂದರ್ಭದಲ್ಲ ಧೋನಿ ವಿಕೆಟ್ ಹಿಂಬದಿಯಿಂದ ಫೀಲ್ಡಿಂಗ್ ಬದಲಾಯಿಸುವಂತೆ ಕಿರುಚಿ ಹೇಳಿದರು, ಆದರೆ ನಾನು ಅದನ್ನು ಕೇಳಿಸಿಕೊಂಡಿರಲಿಲ್ಲ. ಈ ಸಂದರ್ಭದಲ್ಲಿ ಕುಸಲ ಮತ್ತೊಂದು ಬೌಂಡರಿಯನ್ನು ರಿವರ್ಸ್ ಸ್ವೀಪ್ ಮೂಲಕ ಬಾರಿಸಿದ್ದರು. ಇದು ಧೋನಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತು ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.
ಹುಚ್ಚಾ ನನಗೆ, 300 ಪಂದ್ಯ ಆಡಿದ್ದೇನೆ..
'ಆಗ ಆಕ್ರೋಶದಿಂದ ಧೋನಿ ತನ್ನತ್ತ ಆಗಮಿಸಿ" ನಾನೇನು ಹುಚ್ಚನಾ, 300 ಪಂದ್ಯಗಳನ್ನು ಆಡಿದ್ದೇನೆ, ನನ್ನ ಮಾತನ್ನು ಕೇಳಲ್ವ ನೀನು" ಎಂದು ಧೋನಿ ಹೇಳಿದ್ದರು' ಎಂದು ಕುಲ್ದೀಪ್ ಯಾದವ್ ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ಕಳೆದ 20 ವರ್ಷದಿಂದ ಕೋಪಗೊಂಡಿಲ್ಲ
ಈ ಘಟನೆಯ ಬಳಿಕ ನಾನು ಭಯಗೊಂಡಿದ್ದೆ ಎಂದ ಕುಲ್ದೀಪ್ ಪಂದ್ಯ ಮುಗಿದ ಬಳಿಕ ಧೋನಿಯ ಜೊತೆಗೆ ಮಾತನಾಡಿದ್ದರಂತೆ. ಆಗ ಧೋನಿ ನಾನು ಕಳೆದ 20 ವರ್ಷಗಳಲ್ಲಿ ಕೋಪಗೊಂಡಿದ್ದೇ ಇಲ್ಲ ಎಂದು ಹೇಳಿದ್ದರು ಎಂದು ಇನ್ಸ್ಟಾಗ್ರಾಮ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.