ಭಾರತದ ವಿರುದ್ಧದ 2011 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಆರೋಪಕ್ಕೆ ಕುಮಾರ್ ಸಂಗಕ್ಕರ ಪ್ರತಿಕ್ರಿಯಿಸಿದ್ದಾರೆ. ಅಂದು ಕುಮಾರ್ ಸಂಗಕ್ಕರ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಸಂಗಕ್ಕರ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದುಕೊಂಡಿದೆ.
2011 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಮಡ ಗೆಲುವನ್ನು ಪಡೆಯಬಹುದಾಗಿತ್ತು, ಆದರೆ ಶ್ರೀಲಂಕಾ ಅಂದಿನ ವಿಶ್ವಕಪ್ ಪಂದ್ಯವನ್ನು ಭಾರತಕ್ಕೆ ಮಾರಿಕೊಂಡಿತ್ತು. ಈ ಮಾತನ್ನು ನಾನು ಸಾಕಷ್ಟು ಎಚ್ಚರಿಕೆಯಿಂದಲೇ ಹೇಳುತ್ತಿದ್ದೇನೆ. ಆದರೆ ದೇಶದ ವಿಚಾರವಾಗಿರುವುದರಿಂದ ಹೆಚ್ಚಿನ ಸಂಗತಿಯನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದಿದ್ದರು ಮಹಿಂದಾನಂದ ಅಲುತ್ಗಮಗೆ.
ಭಾರತ-ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್- ಲಂಕಾ ಮಾಜಿ ಕ್ರೀಡಾ ಸಚಿವ ಆರೋಪ
ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರ ಈ ಹೇಳಿಕೆಗೆ ಸಂಗಕ್ಕರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರಲ್ಲಿ ದಾಖಲೆಯಿದ್ದರೆ ಅದನ್ನು ಐಸಿಸಿಯ ಮುಂದೆ ಇಡಲಿ. ಈ ವಿಚಾರದಲ್ಲಿ ವಿಸ್ತೃತ ತನಿಖೆ ನಡೆಯಲಿ ಎಂದು ಸಂಗಕ್ಕರ ಬರೆದುಕೊಂಡಿದ್ದಾರೆ.
ತನ್ನಲ್ಲಿರುವ ದಾಖಲೆಯನ್ನು ಅವರು ಐಸಿಸಿ ಮತ್ತು ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ವಿಭಾಗಕ್ಕೆ ಸಲ್ಲಿಸಲಿ ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದು ಟ್ವಿಟ್ಟರ್ನಲ್ಲಿ ಕುಮಾರ್ ಸಂಗಕ್ಕರ ಆಗ್ರಹಿಸಿದ್ದಾರೆ. ಶ್ರೀಲಂಕಾದ ಇನ್ನೋರ್ವ ಮಾಜಿ ನಾಯಕ ಜಯವರ್ಧನೆ ಇದೇ ವಿಚಾರವಾಗಿ ಬರೆದಿದ್ದ ಟ್ವೀಟ್ಗೆ ಸಂಗಕ್ಕರ ಪ್ರತಿಕ್ರಿಯಿಸುತ್ತಾ ಈ ಮಾತನ್ನು ಹೇಳಿದ್ದಾರೆ.
ವಿಶ್ವಕಪ್ನಲ್ಲಿ ಕಪಿಲ್ ದೇವ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದಿನವಿದು
ಶ್ರೀಲಂಕಾದ ಇನ್ನೋರ್ವ ದಿಗ್ಗಜ ಕ್ರಿಕೆಟಿಗ ಜಯವರ್ಧನೆ ಮಾಜಿ ಕ್ರೀಡಾ ಸಚಿವರ ಈ ಹೇಳಿಕೆ ರಾಜಕೀಯ ದುರುದ್ದೇಶವನ್ನು ಹೊಮದಿದೆಯಾ ಎಂಬ ಅನುಮಾನವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಬರೆದುಕೊಂಡಿದ್ದಾರೆ. ಜಯವರ್ಧನೆ ಟ್ವಿಟ್ಟರ್ನಲ್ಲಿ "ಸದ್ಯದಲ್ಲಿ ಯಾವುದಾದರೂ ಚುನಾವಣೆ ನಡೆಯಲಿದೆಯಾ? ಸರ್ಕಸ್ ಆರಂಭವಾದಂತೆ ಭಾಸವಾಗುತ್ತಿದೆ. ಹೆಸರುಗಳು ಮತ್ತು ಸಾಕ್ಷ್ಯಗಳು ಎಲ್ಲಿ? ಎಂದು ಜಯವರ್ಧನೆ ಪ್ರಶ್ನಿಸಿದ್ದಾರೆ.