ಕ್ರಿಕೆಟರ್ ಆಗಿ ಗಂಭೀರ್ ಬ್ಯಾಟಿಂಗ್ ಇಷ್ಟ
ನಾನೊಬ್ಬ ಕ್ರಿಕೆಟರ್ ಆಗಿ, ಬ್ಯಾಟ್ಸ್ಮನ್ ಆಗಿ ಗಂಭೀರ್ ಅವರ ಬ್ಯಾಟಿಂಗ್ಅನ್ನು ಯಾವಾಗಲೂ ಇಷ್ಟಪಡುತ್ತೇನೆ. ಆದರೆ ಮನುಷ್ಯನಾಗಿ ಆತ ಒಮ್ಮೊಮ್ಮೆ ಒಂದಿಂದು ವಿಚಾರಗಳನ್ನು ಹೇಳುತ್ತಾನೆ. ಆತನಲ್ಲಿ ಈ ಸಮಸ್ಯೆಯಿದೆ. ಈ ಬಗ್ಗೆ ಆತನ ಫಿಸಿಯೋ ಹೇಳಿಕೊಂಡಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಪ್ಯಾಡಿ ಆಪ್ಟನ್ ಹೇಳಿಕೆ ಉಲ್ಲೇಖಿಸಿದ ಅಫ್ರಿದಿ
ಗೌತಮ್ ಗಂಭಿರ್ ವಿಚಾರವಾಗಿ ಟೀಮ್ ಇಂಡಿಯಾದ ಮೆಂಟಲ್ ಕಂಡೀಶನರ್ ಆಗಿ 2009-2011ರವರೆಗೆ ಕರ್ತವ್ಯದಲ್ಲಿದ್ದ ಪ್ಯಾಡಿ ಆಪ್ಟನ್ ಹೇಳಿಕೆಯನ್ನು ಅಫ್ರಿದಿ ಉಲ್ಲೇಖಿಸಿದ್ದಾರೆ. ಆಪ್ಟನ್ ತಮ್ಮ ಪುಸ್ತಕದಲ್ಲಿ ಗಂಭಿರ್ ಬಗ್ಗೆ "ಶತಕಗಳಿಸಿದ ನಂತರವೂ ಗೌತಮ್ ಗಂಭೀರ್ ಸಂಕಟದಲ್ಲಿರುತ್ತಿದ್ದರು ಮತ್ತು ಮಾಡಿದ ತಪ್ಪಿಗೆ ಒತ್ತಡವನ್ನು ಅನುಭವಿಸುತ್ತಿದ್ದರು" ಎಂದು ಬರೆದುಕೊಂಡಿದ್ದರು.
ದುರ್ಬಲ ಮನಸ್ಸಿನ ವ್ಯಕ್ತಿ ಗಂಭೀರ್
ಮಾನಸಿಕ ಕಠಿಣತೆಯ ಬಗ್ಗೆ ಜನಪ್ರಿಯ ವಿಧಾನದ ಮೂಲಕ "ನಾನು ಕೆಲಸ ಮಾಡಿದ ಅತ್ಯಂತ ದುರ್ಬಲ ಮತ್ತು ಮಾನಸಿಕವಾಗಿ ಹೆಚ್ಚು ಅಸುರಕ್ಷಿತ ವ್ಯಕ್ತಿಗಳಲ್ಲಿ ಗೌತಮ್ ಗಂಭೀರ್ ಒಬ್ಬರಾಗಿದ್ದರು ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು.
ಪರ್ಫೆಕ್ಟ್ ಉತ್ತರ ನೀಡಿದ್ದ ಗಂಭೀರ್
ಪ್ಯಾಡಿ ಆಪ್ಟನ್ ತಮ್ಮ ಪುಸ್ತಕದಲ್ಲಿ ಬರೆದ ವಿಚಾರವಾಗಿ ಗೌತ್ ಗಂಭೀರ್ ತೀಕ್ಷ್ಣವಾಗಿ ಉತ್ತರವನ್ನು ನಿಡಿದ್ದರು. "ನಾನು ನನ್ನ ತಂಡ ಭಾರತವನ್ನು ಯಾವಾಗಲೂ ಅತ್ಯುತ್ತಮವಾಗಿರಲು ಬಯಸುತ್ತಿದ್ದೆ. ಆದ ಕಾರನದಿಂದಾಗಿಯೇ ನಾನು ಶತಕಗಳಿಸಿದ ನಂತರವೂ ತೃಪ್ತನಾಗುತ್ತಿರಲಿಲ್ಲ. ಅದರಿಮದ ಅದರಲ್ಲಿ ತಪ್ಪಿದೆ ಎಂದು ನನಗನಿಸಿಲ್ಲ. ನನಗಾಗಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸಿದ್ದೆ' ಎಂದು ಗಂಭೀರ್ ಉತ್ತರವನ್ನು ನೀಡಿದ್ದರು.