ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕ ಆಟಗಾರರಾಗಿ ಲವ್ನೀತ್ ಸಿಸೋಡಿಯಾ 33 ರನ್ ಕಲೆಹಾಕಿದರೆ, ಮೊಹಮ್ಮದ್ ತಾಹಾ 27 ರನ್ ಕಲೆಹಾಕಿದರು. ಇನ್ನುಳಿದಂತೆ ಬಿ ಯು ಶಿವಕುಮಾರ್ 6 ರನ್, ಲಿಯಾನ್ ಖಾನ್ 7 ರನ್, ಸ್ವಪ್ನಿಲ್ ಎಳವೆ ಅಜೇಯ 30 ರನ್, ತುಷಾರ್ ಸಿಂಗ್ 1 ರನ್, ನವೀನ್ ಎಂಜಿ 32 ರನ್ ಗಳಿಸಿದರು. ಮತ್ತು ಅಭಿಮನ್ಯು ಮಿಥುನ್ 19 ರನ್ ಹಾಗೂ ಶರತ್ ಗೌಡ್ ಅಜೇಯ 1 ರನ್ ಕಲೆಹಾಕಿದರು. ಹೀಗೆ ಲವ್ನೀತ್ ಸಿಸೋಡಿಯಾ, ಮೊಹಮ್ಮದ್ ತಾಹಾ, ಸ್ವಪ್ನಿಲ್ ಯೆಳವೆ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ಬ್ಯಾಟಿಂಗ್ ಮಾಡಲಿಲ್ಲ. ಪರಿಣಾಮವಾಗಿ ಹುಬ್ಬಳ್ಳಿ ಟೈಗರ್ಸ್ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ.
ಮೈಸೂರು ವಾರಿಯರ್ಸ್ ಪರ ಶ್ರೇಯಸ್ ಐಯ್ಯರ್ ಮೂರು ವಿಕೆಟ್ಗಳನ್ನು ಪಡೆದುಕೊಳ್ಳುವುದರ ಮೂಲಕ ಉತ್ತಮ ಬೌಲಿಂಗ್ ಮಾಡಿದರು. ಇನ್ನುಳಿದಂತೆ ಪ್ರತೀಕ್ ಜೈನ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ ಹಾಗೂ ಆದಿತ್ಯ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
ಮೈಸೂರು ವಾರಿಯರ್ಸ್ ಇನ್ನಿಂಗ್ಸ್
ಹುಬ್ಬಳ್ಳಿ ಟೈಗರ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಮೈಸೂರು ವಾರಿಯರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕರುಣ್ ನಾಯರ್ 23 ರನ್ ಗಳಿಸಿದರೆ, ನಿಹಾಲ್ ಉಲ್ಲಾಳ್ ಅಜೇಯ 77 ರನ್ ಕಲೆಹಾಕಿ ಈ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನುಳಿದಂತೆ ಪವನ್ ದೇಶಪಾಂಡೆ 24 ರನ್, ಶ್ರೇಯಸ್ ಗೋಪಾಲ್ 32 ರನ್, ಶುಭಾಂಗ್ ಹೆಗ್ಡೆ ಡಕ್ ಔಟ್, ಶಿವರಾಜ್ ಎಸ್ ಡಕ್ ಔಟ್ ಹಾಗೂ ನಾಗ ಭರತ್ ಅಜೇಯ 6 ರನ್ ಕಲೆಹಾಕಿದರು. ನಿಹಾಲ್ ಉಲ್ಲಾಳ್ ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿ ಉತ್ತಮ ಪ್ರದರ್ಶನ ನೀಡಿದರೆ, ಬೌಲಿಂಗ್ನಲ್ಲಿ ಮೂರು ವಿಕೆಟ್ ಹಾಗೂ ಬ್ಯಾಟಿಂಗ್ನಲ್ಲೂ ಮಿಂಚಿದ ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹುಬ್ಬಳ್ಳಿ ಟೈಗರ್ಸ್ ಪರ ಆಕಾಶ್ ದೊಡ್ಡಮನಿ ನಾಲ್ಕು ವಿಕೆಟ್ ಪಡೆದರೆ, ನವೀನ್ ಎಂಜಿ ಒಂದು ವಿಕೆಟ್ ಪಡೆದರು.
ಕ್ವಾಲಿಫೈಯರ್ 2ನಲ್ಲಿ ಗೆದ್ದರೆ ಫೈನಲ್
ಇನ್ನು ಈ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಮೈಸೂರು ವಾರಿಯರ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಒಂದನೇ ಕ್ವಾಲಿಫೈಯರ್ ಗೆದ್ದು ಬರಲಿರುವ ತಂಡದ ಜತೆ ಸೆಣಸಾಡಲಿದ್ದು ಆ ಪಂದ್ಯದಲ್ಲಿಯೂ ಗೆದ್ದರೆ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ. ಇನ್ನು ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಿದರೆ, ಸೋಲುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಜತೆವ ಫೈನಲ್ ಪ್ರವೇಶಕ್ಕಾಗಿ ಹೋರಾಡಲಿದೆ.