ಮನೀಷ್ ಪಾಂಡೆ ಅತಿ ಹೆಚ್ಚು ಬೇಸರ ಮೂಡಿಸಿದ ಆಟಗಾರ
ವಿರೇಂದ್ರ ಸೆಹ್ವಾಗ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ಬೇಸರಕ್ಕೊಳಗಾಗಿರುವುದು ಮನೀಷ್ ಪಾಂಡೆ ಪ್ರದರ್ಶನದಿಂದ. ಹೌದು ಸರಣಿಯ 3 ಪಂದ್ಯಗಳಲ್ಲಿಯೂ ಆಡುವ ಅವಕಾಶ ಲಭಿಸಿದರೂ ಸಹ ಉತ್ತಮ ಪ್ರದರ್ಶನ ನೀಡದ ಮನೀಷ್ ಪಾಂಡೆ ಕಳಪೆ ಪ್ರದರ್ಶನ ನೀಡಿ ಸಿಕ್ಕ ಒಳ್ಳೆಯ ಅವಕಾಶವನ್ನು ಸಹ ಕೈಚೆಲ್ಲಿದ್ದಾರೆ. ಹೀಗಾಗಿ ವಿರೇಂದ್ರ ಸೆಹ್ವಾಗ್ ಮನೀಷ್ ಪಾಂಡೆ ಆಡಿದ ರೀತಿ ನಿಜಕ್ಕೂ ದೊಡ್ಡ ಮಟ್ಟದ ಬೇಸರವನ್ನುಂಟು ಮಾಡಿತು ಎಂದು ಹೇಳಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಕೂಡ ಅಷ್ಟೆ
ಇನ್ನೂ ಮುಂದುವರಿದು ಮಾತನಾಡಿದ ವೀರೇಂದ್ರ ಸೆಹ್ವಾಗ್ ಹಾರ್ದಿಕ್ ಪಾಂಡ್ಯ ಆಟದ ಕುರಿತು ಸಹ ಬೇಸರವನ್ನು ವ್ಯಕ್ತಪಡಿಸಿದರು. ಮನೀಷ್ ಪಾಂಡೆ ನಂತರ ಹಾರ್ದಿಕ್ ಪಾಂಡ್ಯ ಕೂಡ ಸಿಕ್ಕಿದ್ದ ಒಂದೊಳ್ಳೆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಕಳಪೆ ಪ್ರದರ್ಶನ ನೀಡಿದರು ಎಂದು ವಿರೇಂದ್ರ ಸೆಹ್ವಾಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಉತ್ತಮ ಆಟ
ಈ ಇಬ್ಬರೂ ಆಟಗಾರರಿಗೆ ಹೋಲಿಸಿದರೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಉತ್ತಮ ರನ್ ಕಲೆ ಹಾಕಿದರು ಹೀಗಾಗಿ ಮಧ್ಯಮ ಕ್ರಮಾಂಕದ ಆಟಗಾರರ ಆಯ್ಕೆಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.