ಮನೀಷ್ ಪಾಂಡೆಗೆ ಸರಿಯಾದ ಅವಕಾಶಗಳಿಲ್ಲ ಎಂದಿದ್ದ ಕೋಚ್
ಇತ್ತೀಚೆಗಷ್ಟೇ ಮನೀಷ್ ಪಾಂಡೆಯ ಕೋಚ್ ಇರ್ಫಾನ್ ಸೇಠ್ ಕೂಡ ಮನೀಷ್ ಪಾಂಡೆಗೆ ಟೀಮ್ ಇಂಡಿಯಾದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂಬುದರ ಕುರಿತು ಮಾತನಾಡಿದರು. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಪಟ್ಟಿಯಲ್ಲಿ ಮನೀಷ್ ಪಾಂಡೆ ಹೆಸರು ಕಂಡುಬಂದ ನಂತರ ಮಾತನಾಡಿದ ಇರ್ಫಾನ್ ಸೇಠ್ ಕೇವಲ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದು ಮಾತ್ರವಲ್ಲದೇ ಉತ್ತಮ ಅವಕಾಶಗಳನ್ನು ಮನೀಷ್ ಪಾಂಡೆಗೆ ನೀಡಬೇಕು ಆತ ಮುಂಬರುವ ದಿನಗಳಲ್ಲಿ ಭಾರತದ ಸೂಪರ್ ಸ್ಟಾರ್ ಆಗುವಂತಹ ಆಟಗಾರ ಎಂದು ಹೇಳಿದ್ದರು.
ಮನೀಷ್ ಪಾಂಡೆಗೆ ಧವನ್ ಮತ್ತು ಭುವನೇಶ್ವರ್ಗಿಂತ ಅನುಭವ ಹೆಚ್ಚು
ಇನ್ನು ಮನೀಷ್ ಪಾಂಡೆಗೆ ನಾಯಕ ಪಟ್ಟ ಸಿಗಬೇಕೆಂದು ಮಾತನಾಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಶ್ರೀಲಂಕಾ ಪ್ರವಾಸಕ್ಕೆ ನಾಯಕನಾಗಿ ಘೋಷಿಸಲ್ಪಟ್ಟಿರುವ ಶಿಖರ್ ಧವನ್ ಮತ್ತು ಉಪನಾಯಕನಾಗಿ ಘೋಷಿಸಲ್ಪಟ್ಟಿರುವ ಭುವನೇಶ್ವರ್ ಕುಮಾರ್ಗಿಂತ ಮನೀಷ್ ಪಾಂಡೆಗೆ ಅನುಭವ ಹೆಚ್ಚಿದೆ ಎಂದು ಹೇಳಿದ್ದಾರೆ.
ಎಬಿಡಿ ಆರ್ಸಿಬಿಗೆ, ಮನೀಷ್ ಪಾಂಡೆ ಟೀಮ್ ಇಂಡಿಯಾಗೆ
ಇನ್ನೂ ಮುಂದುವರಿದು ಮಾತನಾಡಿರುವ ದೊಡ್ಡ ಗಣೇಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಬಿ ಡಿವಿಲಿಯರ್ಸ್ ಆಡುವ ರೀತಿ ಟೀಮ್ ಇಂಡಿಯಾಗೆ ಮನೀಷ್ ಪಾಂಡೆ ಆಡಬೇಕು. ನಾಲ್ಕನೇ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಅತ್ಯದ್ಭುತ ಪ್ರದರ್ಶನವನ್ನು ನೀಡಲಿದ್ದು ಶ್ರೀಲಂಕಾ ಪ್ರವಾಸದಲ್ಲಿ ಒಳ್ಳೆಯ ಆಟವನ್ನು ಆಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿ ಎಂದು ದೊಡ್ಡ ಗಣೇಶ್ ಆಶಿಸಿದ್ದಾರೆ.