ಭಾರತದ ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ ಶ್ಲಾಘಿಸಿದ್ದಾರೆ. ಮಹಿಳಾ ಕ್ರಿಕೆಟ್ ಉನ್ನತಿಗಾಗಿ ಗಂಗೂಲಿ ಪ್ರಯತ್ನಗಳು ನಿಜಕ್ಕೂ ಪ್ರೋತ್ಸಾಹಕದಾಯಕವಾಗಿದೆ ಎಂದು ಮಿಥಾಲಿ ಹೇಳಿದ್ದಾರೆ.
ಮಹಿಳಾ ಟಿ 20 ಚಾಲೆಂಜ್ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯುತ್ತಿದ್ದು ಮೂರು ತಂಡಗಳು ಭಾಗವಹಿಸುತ್ತಿವೆ. ನಾಲ್ಕು ದಿನಗಳ ಸುದೀರ್ಘ ಪಂದ್ಯಾವಳಿ ಮಹಿಳಾ ಕ್ರಿಕೆಟ್ಗೆ ಉತ್ತೇಜನ ನೀಡಿದೆ, ಆದರೂ ಅದು ಪೂರ್ಣ ಪ್ರಮಾಣದಲ್ಲಿಲ್ಲ.
ವೆಲಾಸಿಟಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟ್ರೈಲ್ಬ್ಲೇಜರ್ಸ್
ಮಿಥಾಲಿ ರಾಜ್, ಹರ್ಮನ್ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಅವರನ್ನು ಆಯಾ ಫ್ರಾಂಚೈಸಿಗಳಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನವೆಂಬರ್ 4 ಮತ್ತು 9 ರ ನಡುವೆ ಈ ಟೂರ್ನಿ ನಡೆಯಲಿದೆ. ಈ ಮಹಿಳಾ ಟಿ20 ಟೂರ್ನಿಯಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ನ ಕೆಲವು ಪ್ರಮುಖ ತಾರೆಯರೊಂದಿಗೆ ಸಂಯೋಜಿಸಲಾಗಿದೆ.
"ಮಹಿಳೆಯರ ಕ್ರಿಕೆಟ್ ಬೆಳವಣಿಗೆ ಮತ್ತು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ನಮ್ಮ ಅಧ್ಯಕ್ಷ @SGanguly99 ಅವರಿಗೆ ಮತ್ತು ಬಿಸಿಸಿಐಗೆ ಹೇಗೆ ಆದ್ಯತೆಯಾಗಿದೆ ಎಂಬುದರ ಕುರಿತು ಮಾತನಾಡುತ್ತಿರುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ" ಎಂದು ಮಿಥಾಲಿ ರಾಜ್ ಟ್ವೀಟ್ ಮಾಡಿದ್ದಾರೆ.
ರಾಜ್ ತನ್ನ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಆದರೆ ಅವರು ಈಗಾಗಲೇ ರಾಷ್ಟ್ರೀಯ ತಂಡಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದು, ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ.