ಪುಣೆ, ನವೆಂಬರ್ 04: 2017ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ. ಮಹಾರಾಷ್ಟ್ರ ವಿರುದ್ಧದ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 136ರನ್ ಗಳಿಂದ ಗೆದ್ದು ಸಂಭ್ರಮಿಸಿದೆ.
ದ್ವಿಶತಕ ಸಿಡಿಸಿ 70 ವರ್ಷ ಹಳೆಯ ದಾಖಲೆ ಮುರಿದ ಪೂಜಾರಾ
ಕರ್ನಾಟಕ ಮಹಾರಾಷ್ಟ್ರವನ್ನು ಇನ್ನಿಂಗ್ಸ್ ಹಾಗು ೧೩೬ರನ್ ಗಳಿಂದ ಮಣಿಸಿ ಬೋನಸ್ ಪಾಯಿಂಟ್ ಗಳಿಸಿ,ಈ ಸಾಲಿನ 3ನೇ ಜಯ ಪಡೆದಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
— Karnataka Ranji Team (@RanjiKarnataka) November 4, 2017
383ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡ ಕರ್ನಾಟಕ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಆರಂಭದಿಂದಲೇ ಇತ್ತು. ಮೂರನೇ ದಿನದ ಅಂತ್ಯಕ್ಕೆ 135/4 ಸ್ಕೋರ್ ಮಾಡಿದ್ದ ಮಹಾರಾಷ್ಟ್ರ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 247ಸ್ಕೋರ್ ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.
ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಅವರು 66ರನ್ನಿತ್ತು 5ವಿಕೆಟ್ ಪಡೆದು ಮಹಾರಾಷ್ಟ್ರದ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಮಹಾರಾಷ್ಟ್ರದ ಪರ ಋತುರಾಜ್ ಗಾಯಕ್ವಾಡ್ 65ರನ್(130 ಎಸೆತಗಳು, 10 ಬೌಂಡರಿ) ಗಳಿಸಿ ಪ್ರತಿರೋಧ ವ್ಯಕ್ತಪಡಿಸಿದರು. ತ್ರಿಶತಕ ಬಾರಿಸಿದ ಮಾಯಾಂಕ್ ಅಗರವಾಲ್ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.