ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಐತಿಹಾಸಿಕವಾಗಿ ಗೆದ್ದಿರುವ ಟೀಮ್ ಇಂಡಿಯಾದ ಆಟಗಾರರು ಸಂಭ್ರಮದಿಂದ ತವರಿಗೆ ಮರಳಿದ್ದಾರೆ. ಎಲ್ಲರೂ ತಮ್ಮ ಕುಟುಂಬವನ್ನು ನೋಡುವ ಸಂಭ್ರಮದಲ್ಲಿದ್ದರೆ ಓರ್ವ ಆಟಗಾರ ಮಾತ್ರ ಆಸಿಸ್ ಪ್ರವಾಸದ ಮಧ್ಯೆಯೇ ಇಹಲೋಕ ತ್ಯಜಿಸಿದ ತಂದೆಯ ಸಮಾಧಿಗೆ ತೆರಳಿದರು. ಅದು ಬೇರೆ ಯಾರೂ ಅಲ್ಲ ವೇಗಿ ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾದಿಂದ ಹೈದರಾಬಾದ್ನ ರಾಜೀವ್ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊಹಮ್ಮದ್ ಸಿರಾಜ್ ಏರ್ಪೋರ್ಟ್ನಿಂದ ನೇರವಾಗಿ ತೆರಳಿದ್ದು ತಮ್ಮ ತಂದೆಯ ಸಮಾಧಿಯ ಕಡೆಗೆ. ತಂದೆಯ ಅಗಲಿಕೆಯ ಬಳಿಕ ಇದೇ ಮೊದಲ ಬಾರಿಗೆ ತವರಿಗೆ ಮರಳಿರುವ ಸಿರಾಜ್ ತಮ್ಮ ತಂದೆಯ ಸಮಾಧಿಗೆ ಅಂತಿಮ ನಮನವನ್ನು ಸಲ್ಲಿಸಿದರು.
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಅವರ ತಂದೆ ಮೊಹಮ್ಮದ್ ಗೌಸ್ ಅನಾರೋಗ್ಯದಿಂದ ನಿಧನರಾಗಿದ್ದರು. ಆದರೆ ಈ ಸಂದರ್ಭದಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಅವಕಾಶವನ್ನು ಪಡೆದುಕೊಂಡಿದ್ದ ಸಿರಾಜ್ ತಂದೆಯ ಕನಸನ್ನು ಈಡೇರಿಸಲು ತವರಿಗೆ ಮರಳದೆ ತಂಡದ ಜೊತೆಯಲ್ಲೇ ಉಳಿದುಕೊಳ್ಳುವ ನಿರ್ಧಾರವನ್ನು ಮಾಡಿದ್ದರು.
ಐಪಿಎಲ್ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಒಟ್ಟು ನಾಲ್ಕೂವರೆ ತಿಂಗಳ ಅವಧಿಯಲ್ಲಿ ಸಿರಾಜ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡರು. ಆದರೆ ಇದನ್ನು ಸಂಭ್ರಮಿಸುವ ಮನಸ್ಥಿಯಲ್ಲಿರಲಿಲ್ಲ. ಆದರೆ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಧೋನಿ ಜೊತೆಗೆ ನನ್ನನ್ನು ಹೋಲಿಸುವುದು ನ್ಯಾಯ ಅಲ್ಲ ಎಂದ ರಿಷಭ್ ಪಂತ್
ಬಡ ಕುಟುಂಬದಿಂದ ಬಂದ ಮೊಹಮ್ಮದ್ ಸಿರಾಜ್ ಅವರ ಕ್ರಿಕೆಟ್ ವೃತ್ತಿ ಜೀವನ ರೂಪಿಸುವಲ್ಲಿ ಅವರ ತಂದೆ ಸಾಕಷ್ಟು ನಿರ್ಣಾಯಕ ಪಾತ್ರವಹಿಸಿದ್ದರು. ಆದರೆ ಆಸ್ಟ್ರೇಲಿಯಾದಂತ ಮಹತ್ವದ ಪ್ರವಾಸದಲ್ಲಿ ತ