ಶನಿವಾರ ಅಭ್ಯಾಸ ಶಿಬಿರ ಮೊಟಕು
ಸದ್ಯ ಬಿಸಿಸಿಐ ಐಪಿಎಲ್ ಅನ್ನು ಏಪ್ರಿಲ್ 15ರವರೆಗೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶನಿವಾರ ಅಭ್ಯಾಸ ಶಿಬಿರವನ್ನು ಮೊಟಕುಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ಬೆಳವಣಿಗೆಯ ಬಳಿಕ ಧೋನಿ ಭಾನುವಾರ ಚೆನ್ನೈಯಿಂದ ವಾಪಾಸ್ಸಾಗಿದ್ದಾರೆ.
ಕ್ರಿಕೆಟ್ನಿಂದ ದೂರವಾಗಿದ್ದ ಧೋನಿ
ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಕಳೆದ ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋತು ಹೊರಬಿದ್ದ ಬಳಿಕ ಕ್ರಿಕೆಟ್ನಿಂದ ದೂರವಾಗಿದ್ದರು. ಕ್ರಿಕೆಟ್ ಅಭ್ಯಾಸದಿಂದಲೂ ಧೋನಿ ದೂರವಾಗಿದ್ದರು.
ಸಹಪಾಠಿಗಳ ಜೊತೆ ಭರ್ಜರಿ ತಾಲೀಮು
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಚಟುವಟಿಕೆಗಳಿಂದ ದೂರವಾಗಿದ್ದರು. ಐಪಿಎಲ್ ಹಿನ್ನೆಲೆಯಲ್ಲಿ ಮತ್ತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚೆನ್ನೈ ತಂಡದ ಇತರ ಸದಸ್ಯರಾದ ಸುರೇಶ್ ರೈನಾ ಅಂಬಾಟಿ ರಾಯುಡು ಸೇರಿದಂತೆ ಇತರ ಸದಸ್ಯರೊಂದಿಗೆ ನಿತ್ಯವೂ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.
ವಿಶ್ವಕಪ್ಗೆ ನಿರ್ಣಾಯಕ
ಧೋನಿ ಮುಂದಿನ ಟಿ20 ವಿಶ್ವಕಪ್ನಲ್ಲಿ ಆಡುತ್ತಾರೋ ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಐಪಿಎಲ್ ಪ್ರದರ್ಶನದ ಆಧಾರದಲ್ಲಿ ಆವರ ಅಂತಾರಾಷ್ಟ್ರೀಯ ಕಮ್ಬ್ಯಾಕ್ಗೆ ವೇದಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಧೋನಿ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿನೆಟ್ಟಿದೆ.
ಮುಂದಿನ ಬೆಳವಣಿಗೆಗಳ ಆಧಾರದಲ್ಲಿ ತಿರ್ಮಾನ
ಸದ್ಯ ಐಪಿಎಲ್ಅನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. ಕೊರೊನಾ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಆಧಾರದಲ್ಲಿ ಬಿಸಿಸಿಐ ಐಪಿಎಲ್ ಕುರಿತಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ