ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀ ಕ್ರಿಕೆಟ್ನಿಂದ ದೂರವಾಗಿ ಸರಿಯಾಗಿ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ಧೋನಿ ಗೆಳೆಯ ಮ್ಯಾನೇಜರ್ ಆಗಿರುವ ಮಿಹಿರ್ ದಿವಾಕರ್ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
ಧೋನಿ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿಲ್ಲ, ಐಪಿಎಲ್ನಲ್ಲಿ ಆಡಲು ಉತ್ಸುಕರಾಗಿದ್ದಾರೆ ಎಂದು ಧೋನಿ ಬಾಲ್ಯದ ಗೆಳೆಯ ಹಾಗೂ ಮ್ಯಾನೇಜರ್ ಮಿಹಿರ್ ದಿವಾಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ಧೋನಿ ನಿವೃತ್ತಿ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮತ್ತೆ ಆರಂಭವಾದ ಕ್ರಿಕೆಟ್: ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮಾ, ರಿಕಿ ಪಾಂಟಿಂಗ್
ಸೌಥಾಂಪ್ಟನ್ನಲ್ಲಿ ಕಳೆದ ವರ್ಷ ಇದೇ ದಿನ (ಜುಲೈ9) ನಡೆದ ಭಾರತ-ನ್ಯೂಜಿಲೆಂಡ್ ನಡುವಿನ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವೇ ಧೋನಿ ಪಾಲಿಗೆ ಕಡೇ ಪಂದ್ಯವಾಗಿದೆ. ಅಂದಿನ ಪಂದ್ಯದಲ್ಲಿ ಆಘಾತಕಾರಿಯಾಗಿ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬದ್ದ ಬಳಿಕ ಧೋನಿ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಧೋನಿ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ.
ಈ ಚರ್ಚೆಗೆ ಉತ್ತರ ನೀಡಿರುವ ಧೋನಿ ಸ್ನೇಹಿತ, ಐಪಿಎಲ್ಗಾಗಿ ಧೋನಿ ಸಿದ್ಧಗೊಳ್ಳುತ್ತಿದ್ದು, ನಿವೃತ್ತಿ ಬಗ್ಗೆ ಅವರು ಯೋಚಿಸಿಲ್ಲ ಎಂದಿದ್ದಾರೆ. ಭಾರತ ತಂಡದ ಮಾಜಿ ಎಂಎಸ್ ಧೋನಿ ಮಂಗಳವಾರವಷ್ಟೇ 39ನೇ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡರು.
ಏಷ್ಯಾ ಕಪ್ 2020 ರದ್ದುಗೊಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಸಿಎಸ್ಕೆ ತಂಡದ ನಾಯಕನಾಗಿರುವ ಧೋನಿ, ಐಪಿಎಲ್ ಸಿದ್ಧತೆಗಾಗಿ ತಂಡದ ಸಹ ಸದಸ್ಯರಾದ ಸುರೇಶ್ ರೈನಾ, ಪೀಯುಷ್ ಚಾವ್ಲ, ಅಂಬಟಿ ರಾಯುಡು ಜತೆಗೂಡಿ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದರು. ಕರೊನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಮುಂದೂಡಿರುವುದನ್ನು ಘೋಷಿಸಿದ ಬಳಿಕ ಧೋನಿ ರಾಂಚಿಗೆ ವಾಪಾಸ್ಸಾಗಿದ್ದರು.