ತಂಡವನ್ನು ಕಟ್ಟಲು ಗಂಗೂಲಿ ಪರಿಶ್ರಮ
ಗೌತಮ್ ಗಂಭೀರ್ ಹೇಳಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಅದು ಹಾಕಿ ಬಿಸಿಸಿಐ ಅಧ್ಯಕ್ಷ ಮಾಜಿ ಟೀಮ್ ನಾಯಕ ಸೌರವ್ ಗಂಗೂಲಿ. ಸೌರವ್ ಗಂಗೂಲಿ ತಂಡವನ್ನು ಕಟ್ಟಲು ಹಾಕಿದ ಕಠಿಣ ಪರಿಶ್ರಮದ ಫಲವನ್ನು ಧೋನಿ ಅನುಭವಿಸಿದರು ಎಂದು ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
"ಗಂಗೂಲಿ ಪರಿಶ್ರಮದ ಫಲ"
"2011ರ ವಿಶ್ವಕಪ್ ತಂಡವನ್ನು ಮುನ್ನಡೆಸುವುದು ಧೋನಿಗೆ ತುಂಬಾ ಸುಲಭವಾಗಿತ್ತು. ಯಾಕೆಂದರೆ ಸಚಿನ್, ಸೆಹ್ವಾಗ್, ತಾನು(ಗಂಭೀರ್), ಯುವರಾಜ್ ಸಿಂಗ್, ಯೂಸುಫ್ ಪಠಾಣ್, ವಿರಾಟ್ ಕೊಹ್ಲಿಯಂತಾ ಆಟಗಾರರು ತಂಡದಲ್ಲಿದ್ದರು. ಈ ಮೂಲಕ ಅತ್ಯುತ್ತಮ ತಂಡವನ್ನು ಅವರು ಹೊಂದಿದ್ದರು. ಇದಕ್ಕಾಗಿ ಸೌರವ್ ಗಂಗೂಲಿ ಕಠಿಣ ಪರಿಶ್ರಮವನ್ನು ಪಟ್ಟಿದ್ದರು. ಅದರ ಪರಿಣಾಮವಾಗಿ ಧೋನಿ ಹಲವು ಟ್ರೋಫಿಗಳನ್ನು ಗೆದ್ದುಕೊಂಡರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಟೆಸ್ಟ್ ಮಾದರಿಯಲ್ಲಿ ಯಶಸ್ಸಿಗೆ ಜಹೀರ್ ಕಾರಣ
ಟೆಸ್ಟ್ ಕ್ರಿಕೆಟ್ನಲ್ಲಿ ಧೋನಿ ಯಶಸ್ಸನ್ನು ಗಳಿಸಲು ಕಾರಣ ಟೀಮ್ ಇಂಡಿಯಾದ ವೇಗಿ ಜಹೀರ್ ಖಾನ್ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಧೋನಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಜಹೀರ್ ಖಾನ್. ಅದರ ಶ್ರೇಯಸ್ಸು ಕೂಡ ಮಾಜಿ ನಾಯಕ ಸೌರವ್ ಗಂಗೂಲಿಗೆ ಸೇರಬೇಕು ಎಂದು ಗಂಭೀರ್ ಹೇಳಿದ್ದಾರೆ.
ಒಂದೇ ರೂಮ್ನಲ್ಲಿನ ನೆನಪು ಹಂಚಿಕೊಂಡ ಗಂಭೀರ್
ಇನ್ನು ಗೌತಮ್ ಗಂಭೀರ್ ಧೋನಿಯ ಜೊತೆಗೆ ಒಂದೇ ರೂಮ್ನಲ್ಲಿ ಕಳೆದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಾವು ಒಂದೇ ರೂಮ್ನಲ್ಲಿ ಕಳೆದಿದ್ದೆವು. ಆ ಸಂದರ್ಭದಲ್ಲಿ ನಾವು ಹೆಚ್ಚಾಗಿ ಕೂದಲ ಬಗ್ಗೆ ಮಾತನಾಡುತ್ತಿದ್ದೆವು. ಯಾಕೆಂದರೆ ದೊನಿ ಉದ್ದನೆಯ ಕೂದಲನ್ನು ಹೊಂದಿದ್ದರು ಎಂದು ಗಂಭೀರ್ ಹೇಳಿದ್ದಾರೆ. ಜೊತೆಗೆ ಪುಟ್ಟ ಕೋಣೆಯನ್ನು ಹೊಂದಿದ್ದ ಕಾರಣ ರೂಮ್ನಿಂದ ಬೆಡ್ಗಳನ್ನು ಹೊರಗೆ ಹಾಕಿ ನಾವಿಬ್ಬರೂ ನೆಲದಲ್ಲೇ ಮಲಗಿಕೊಂಡಿದ್ದೆವು ಎಂಬೂದನ್ನೂ ಗಂಭೀರ್ ಸ್ಮರಿಸಿದ್ದಾರೆ.
ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಪಾತ್ರ
ಟೀಮ್ ಇಂಡಿಯಾದ ಸ್ಟೈಲಿಶ್ ಎಡಗೈ ಆಟಗಾರ ಗೌತಮ್ ಗಂಭೀರ್ ಭಾರತ ವಿಶ್ವಕಪ್ ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಂಭೀರ್ 97 ರನ್ ಗಳಿಸಿ ಶತಕ ವಂಚಿತರಾಗಿದ್ದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಧೋನಿ ಅಜೇಯ 91 ರನ್ ಗಳಿಸಿ 6 ವಿಕೆಟ್ ಗಳಿಂದ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.