|
ಜಿದ್ದಾಜಿದ್ದಿನ ಪೈಪೋಟಿ
ಈ ಪಂದ್ಯ 17ನೇ ಓವರ್ನ ಅಂತಿಮ ಎಸೆತದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಎದುರಾಳಿ ಫಾರ್ಚೂನ್ ಬಾರಿಶಾಲ್ ತಂಡಕ್ಕೆ 19 ಎಸೆತಗಳಲ್ಲಿ 45 ರನ್ಗಳ ಅವಶ್ಯಕತೆಯಿತ್ತು, ಐದು ವಿಕೆಟ್ಗಳು ಬಾಕಿಯಿತ್ತು. ಬ್ಯಾಟ್ಸ್ಮನ್ ಆಫಿಫ್ ಹುಸೈನ್ ಉತ್ತಮ ಲಯದಲ್ಲಿದ್ದು, ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಲು ಪ್ರಯತ್ನಿಸಿದರು. ಆದರೆ ಈ ಸಂದರ್ಭದಲ್ಲಿ ಚೆಂಡು ಸರಿಯಾಗಿ ಬ್ಯಾಟ್ಅನ್ನು ಸಂಪರ್ಕಿಸದೆ ಗಾಳಿಯಲ್ಲಿ ಹಾರಿತ್ತು.
ಬುಸುಗುಟ್ಟಿದ ರಹೀಮ್
ಈ ಚೆಂಡನ್ನು ಹಿಡಿಯಲು ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹಾಗೂ ಗಲ್ಲಿಯಲ್ಲಿ ನಿಂತಿದ್ದ ನಸುಮ್ ಧಾವಿಸಿದರು. ಕೊನೆಗೆ ವಿಕೆಟ್ ಕೀಪರ್ ರಹೀಮ್ ಈ ಕ್ಯಾಚ್ಅನ್ನು ಯಶಸ್ವಿಯಾಗಿ ಪಡೆದರಾದರೂ ನಸುಮ್ ಮೇಲೆ ಆಕ್ರೋಶದಿಂದ ಹಲ್ಲೆಗೆ ಮುಂದಾದರು. ಆದರೆ ಬಳಿಕ ನಿಯಂತ್ರಿಸಿಕೊಂಡರಾದರೂ ಅವರ ಆಕ್ರೋಶ ತಣಿದಿರಲಿಲ್ಲ. ಮೈದಾನದಲ್ಲೇ ತಾಳ್ಮೆಗೆಟ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಟ್ವಿಟ್ಟರ್ನಲ್ಲಿ ಭಾರೀ ಟೀಕೆ
ನಾಯಕ ಮುಷ್ಫಿಕರ್ ರಹೀಮ್ ಅವರ ಈ ವರ್ತನೆ ಸಹ ಆಟಗಾರರಿಗೂ ಆಶ್ಚರ್ಯವನ್ನು ತಂದಿತ್ತು. ಎಲ್ಲರೂ ಸಮಾಧಾನಿಸುವ ಪ್ರಯತ್ನ ಮಾಡಿದರು. ಆದರೆ ಟ್ವಿಟ್ಟರ್ನಲ್ಲಿ ಮಾತ್ರ ಈ ವರ್ತನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.