ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಯ್ಯದ್ ಮುಷ್ತಾಕ್ ಅಲಿ: ತಮಿಳುನಾಡು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Mushtaq Ali T20: Tamil Nadu march into quarterfinals

ಚೆನ್ನೈ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ತಮಿಳುನಾಡು ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಸೋಮವಾರ (ಜನವರಿ 18) ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಲೀಗ್‌ ಹಂತದ ಕೊನೇ ಪಂದ್ಯದಲ್ಲಿ ತಮಿಳುನಾಡು ತಂಡ ಬೆಂಗಾಲ್ ವಿರುದ್ಧ 8 ವಿಕೆಟ್ ಜಯ ಸಾಧಿಸಿದೆ.

'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!''ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಾಲ್ ತಂಡ, ಶ್ರೀವತ್ಸ್ ಗೋಸ್ವಾಮಿ 21, ಕೈಫ್ ಅಹ್ಮದ್ 63, ನಾಯಕ ಅನುಸ್ತೂಪ್‌ ಮಜುಂದಾರ್ 34, ಸುವಂಕರ್ ಬಲ್ 14 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತ್ತು.

ಗುರಿ ಬೆಂಬತ್ತಿದ ತಮಿಳುನಾಡು, ಹರಿ ನಿಶಾಂತ್ 14, ಎನ್ ಜಗದೀಶನ್ ಅಜೇಯ 71, ಅರುಣ್ ಕಾರ್ತಿಕ್ 30, ನಾಯಕ ದಿನೇಶ್ ಕಾರ್ತಿಕ್ ಅಜೇಯ 47 ರನ್‌ನೊಂದಿಗೆ 18 ಓವರ್‌ಗೆ 2 ವಿಕೆಟ್ ಕಳೆದು 167 ರನ್ ಗಳಿಸಿತು. ಈ ಗೆಲುವಿನೊಂದಿಗೆ ಎಲೈಟ್ ಗ್ರೂಪ್‌ 'ಬಿ'ಯಲ್ಲಿರುವ ತಮಿಳುನಾಡು ಆಡಿರುವ 5 ಪಂದ್ಯಗಳಲ್ಲಿ 5 ಜಯದೊಂದಿಗೆ ಅಗ್ರ ಸ್ಥಾನದಲ್ಲಿ ಲೀಗ್‌ ಸ್ಪರ್ಧೆ ಮುಗಿಸಿದೆ.

ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?

ಬೆಂಗಾಲ್ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿನ ಅಪರಾಜಿತ್ 2, ಸಾಯ್ ಕಿಶೋರ್ 1, ಮುರುಗನ್ ಅಶ್ವಿನ್ 1, ಜಿ ಪೆರಿಯಾಸ್ವಾಮಿ 1 ವಿಕೆಟ್ ಪಡೆದರೆ, ತಮಿಳುನಾಡು ಇನ್ನಿಂಗ್ಸ್‌ನಲ್ಲಿ ಬೆಂಗಾಲ್‌ನ ಅರ್ನಾಬ್‌ ನಂದಿ 1, ಮುಖೇಶ್ ಕುಮಾರ್ 1 ವಿಕೆಟ್ ಪಡೆದರು. ಗ್ರೂಪ್‌ 'ಎ'ಯಲ್ಲಿರುವ ಕರ್ನಾಟಕ 5ರಲ್ಲಿ 4 ಗೆಲುವಿನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

Story first published: Tuesday, January 19, 2021, 0:13 [IST]
Other articles published on Jan 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X