ಮನೆಯಲ್ಲಿ ಕೂರುವುದು ಅನಿವಾರ್ಯವಾಗಿದೆ
ನೀವು ಎಷ್ಟೇ ಕಠಿಣ ತರಬೇತಿ ಪಡೆದುಕೊಂಡಿದ್ದರೂ ನೀವು ಮನೆಯಲ್ಲಿ ಸುಮ್ಮನೆ ಕುಳಿತರೆ ಎಲ್ಲವೂ ವ್ಯರ್ಥವಾಗುತ್ತದೆ. 14 ದಿನಗಳ ಕ್ವಾರಂಟೈನ್ ಅವಧಿಗೆ ಒಳಗಾಗಲು ಆಟಗಾರರು ತಯಾರಿಲ್ಲ. ಅದು ಅಲ್ಲಿನ ಕಾನೂನು, ಈ ಬಗ್ಗೆ ಶ್ರೀಲಂಕಾ ಮಂಡಳಿಯು ಏನು ಮಾಡಲು ಸಾಧ್ಯವಿಲ್ಲ ಎಂದು ಮುಸ್ತಫಿಜುರ್ ಹೇಳಿದ್ದಾರೆ.
1 ಕೋಟಿ ಬಾಂಗ್ಲಾದೇಶ ಟಾಕಾ ಗಳಿಸುತ್ತಿದ್ದೆ
ಶ್ರೀಲಂಕಾ ಸರಣಿ ಮುಂದೂಡಿಕೆ ಬಗ್ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಮೊದಲೇ ತಿಳಿದಿದ್ದರೆ ಐಪಿಎಲ್ನಲ್ಲಿ ಆಡಲು ಅವಕಾಶ ನೀಡಬೇಕಾಗಿತ್ತು. ಕ್ರಿಕೆಟ್ ಮಂಡಳಿ NoC ಇಲ್ಲದೆ ನಾನೇನು ಮಾಡಲಿ, ಐಪಿಎಲ್ ನಲ್ಲಿ ಆಡಿದ್ದರೆ 1 ಕೋಟಿ ಬಾಂಗ್ಲಾದೇಶ ಟಾಕಾ ಗಳಿಸುತ್ತಿದ್ದೆ ಎಂದು ರಹಮಾನ್ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ ಕೂಡಾ ಮಿಸ್ ಆಗಿತ್ತು
2015-16ರಲ್ಲಿ ಗಾಯಗೊಳ್ಳದಿರಲೆಂದು ಮುಸ್ತಫಿಜುರ್ ಅವರಿಗೆ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲು ಅನುಮತಿ ನೀಡಿರಲಿಲ್ಲ. ಆದರೆ, ಇದಕ್ಕೆ ಬದಲಾಗಿ ಅವರಿಗೆ 30 ಲಕ್ಷ ಬಾಂಗ್ಲಾದೇಶಿ ಟಾಕಾ ಮೊತ್ತ ಪರಿಹಾರ ನೀಡಲಾಗಿತ್ತು. ಆದರೆ, ಈ ಬಾರಿ ಕ್ರಿಕೆಟ್ ಮಂಡಳಿಯ ನಿರ್ವಹಣಾ ಚೇರ್ಮನ್ ಅಕ್ರಮ್ ಖಾನ್ ಅವರು ಯಾವುದೇ ಪರಿಹಾರ ನೀಡುವ ಬಗ್ಗೆ ಮಾತನಾಡಿಲ್ಲ.
2018 ರಲ್ಲಿ ಐಪಿಎಲ್ನಲ್ಲಿ ಆಡಿದ್ದ ಮುಸ್ತಫಿಜುರ್
ಕೊನೆಯ ಬಾರಿಗೆ 2018 ರಲ್ಲಿ ಐಪಿಎಲ್ನಲ್ಲಿ ಆಡಿದ ಮುಸ್ತಫಿಜುರ್ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. ಒಟ್ಟಾರೆ 24 ಪಂದ್ಯಗಳಲ್ಲಿ 24ವಿಕೆಟ್ ಗಳಿಸಿದ್ದಾರೆ. ಆದರೆ, ಗಾಯದಿಂದಾಗಿ ಅವರು ಮಧ್ಯದಲ್ಲೇ ಪಂದ್ಯಾವಳಿಯನ್ನು ತಪ್ಪಿಸಿಕೊಂಡರು. ಈ ಹಿನ್ನೆಲೆಯಲ್ಲಿಯೇ ಕಳೆದ ವರ್ಷವೂ ಐಪಿಎಲ್ನಲ್ಲಿ ಆಡಲು ಬಾಂಗ್ಲಾ ಮಂಡಳಿ ನಿರಾಕರಿಸಿತು. ಬಾಂಗ್ಲಾದೇಶಿ ಆಟಗಾರರು ವಿದೇಶಿ ಕ್ರಿಕೆಟ್ ಲೀಗ್ಗಳಲ್ಲಿ ಆಡಿದರೆ ಅನಗತ್ಯವಾಗಿ ಗಾಯಗೊಳ್ಳುತ್ತಾರೆ ಎಂದು ಕ್ರಿಕೆಟ್ ಮಂಡಳಿ ಅನುಮತಿ ನೀಡಲು ನಿರಾಕರಿಸುತ್ತಿದೆ ಎಂಬ ಮಾತಿದೆ.