ಎರಡನೇ ಬೃಹತ್ ಮೊತ್ತ ಇದು
ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್ ಪರ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ರೆಡ್ಡಿ 32, ನಾಯಕ ಸಿಎಂ ಗೌತಮ್ 92, ಕೃಷ್ಣಪ್ಪ ಗೌತಮ್ 48 ಹಾಗೂ ದೇವದತ್ ಪಡಿಕ್ಕಲ್ 57 ಬಾರಿಸಿದ್ದರು. ಮೈಸೂರು ವಾರಿಯರ್ಸ್ ಪರ ವೈಶಾಕ್ ಎರಡು ವಿಕೆಟ್ ಪಡೆದಿದ್ದರು. ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 240 ರನ್ ಪೇರಿಸಿತ್ತು. ಕೆಪಿಎಲ್ ಇತಿಹಾಸದಲ್ಲಿ ಇದು ಎರಡನೇ ಅತಿ ದೊಡ್ಡ ಮೊತ್ತ. ಈ ಮೊದಲು ಹುಬ್ಬಳ್ಳಿ ಟೈಗರ್ಸ್ 2014ರಲ್ಲಿ ರಾಕ್ ಸ್ಟಾರ್ ತಂಡದ ವಿರುದ್ಧ 245 ರನ್ ಬಾರಿಸಿದ್ದರು.
ಜೋಶಿ ಸಿಡಿಲಬ್ಬರದ ಶತಕ
ದೊಡ್ಡ ಮೊತ್ತವನ್ನ ಚೇಸ್ ಮಾಡಿದ ಮೈಸೂರು ವಾರಿಯರ್ಸ್ ಮೊದಲ ಮೂರು ವಿಕೆಟ್ ಬೇಗನೆ ಕಳೆದುಕೊಂಡಿತು. ಈ ವೇಳೆ ಕ್ರೀಸ್ ಗೆ ಬಂದ ಅನಿರುದ್ಧ ಜೋಶಿ 58 ಎಸೆತದಲ್ಲಿ 125 ರನ್ ಹೊಡೆದರು. ಇದರಲ್ಲಿ 9 ಸಿಕ್ಸರ್ ಹಾಗೂ 7 ಬೌಂಡರಿ ಸೇರಿದ್ದವು.
ಕೆಪಿಎಲ್ 2019: ಭರತ್ ಚಿಪ್ಲಿ ಭರ್ಜರಿ ಬ್ಯಾಟಿಂಗ್, ಬುಲ್ಸ್ ಗೆ ಸುಲಭ ಜಯ
ಗೆಲುವಿನ ದಡ ಸೇರಿಸಿದ ಮಂಜಿಶ್ ರೆಡ್ಡಿ
ಭಾರಿ ರೋಚಕವಾಗಿದ್ದ ಪಂದ್ಯದ ಕೊನೆಯ ಓವರ್ ನಲ್ಲಿ 6 ಎಸೆತಗಳಲ್ಲಿ 20 ರನ್ ಬೇಕಿತ್ತು. ಮೊದಲ ಎಸೆತ 4, ಎರಡನೇ ಎಸೆತ ವಿಕೆಟ್, ಮೂರನೇ ಎಸೆತ 2, ನಾಲ್ಕನೇ ಎಸೆತ 6, ಐದನೇ ಎಸೆತ 2 ಹಾಗೂ ಆರನೇ ಎಸೆತದಲ್ಲಿ 6 ಸಿಕ್ಸರ್ ಬಾರಿಸಿ ಗೆಲುವಿನ ಕೇಕೆ ಹಾಕಿದರು. ಅಂತಿಮ ಒವರ್ ಗಳಲ್ಲಿ ಕ್ರೀಸ್ ಗೆ ಬಂದ ಮಂಜೀಶ್ ರೆಡ್ಡಿ 9 ಎಸೆತಗಳಲ್ಲಿ 30 ಬಾರಿಸಿ ವಿಜಯದ ಪತಾಕೆ ಹಾರಿಸಿದರು.
ಬಳ್ಳಾರಿ ಸೇಫ್, ಮೈಸೂರು ಮೂರನೇ ಸ್ಥಾನ
ಒಟ್ಟು ಆಡಿರುವ ಆರು ಪಂದ್ಯಗಳಲ್ಲಿ ಎರಡು ಪಂದ್ಯವನ್ನ ಗೆದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಎರಡು ಪಂದ್ಯ ಮಳೆ ಅಡ್ಡಿಯಾಗಿ ರದ್ದಾಗಿತ್ತು. ಎರಡು ಪಂದ್ಯ ಸೋತಿತ್ತು. 8 ಅಂಕ ಪಡೆದಿರುವ ಬಳ್ಳಾರಿ ಟಸ್ಕರ್ಸ್ ಮೊದಲ ಸ್ಥಾನದಲ್ಲಿದ್ದರೆ, 7 ಅಂಕಗಳೊಂದಿಗೆ ಬೆಳಗಾವಿ ಪ್ಯಾಂಥರ್ಸ್ ಮೂರನೇ ಸ್ಥಾನದಲ್ಲಿದ್ದಾರೆ.