ಖೇಲ್ ರತ್ನಕ್ಕೆ ಐವರು
ಖೇಲ್ ರತ್ನ ವಿಜೇತರು ಭಾರತದ ಕ್ರೀಡಾ ಪ್ರಾಧಿಕಾರ ನಿಗದಿಪಡಿಸಿದ 9 ಬೇರೆ ಬೇರೆ ತಾಣಗಳಲ್ಲಿದ್ದು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಖೇಲ್ ರತ್ನಕ್ಕೆ ರೋಹಿತ್ ಸೇರಿ ಐವರನ್ನು ಹೆಸರಿಸಲಾಗಿತ್ತು. ಇದರಲ್ಲಿ ರೋಹಿತ್ ಬಿಟ್ಟು ಉಳಿದವರು ಪಾಲ್ಗೊಳ್ಳಲಿದ್ದಾರೆ.
ಬೇರೆ ಬೇರೆ ತಾಣಗಳಲ್ಲಿ ಭಾಗಿ
ಖೇಲ್ ರತ್ನ ವಿಜೇತರಲ್ಲಿ ರಸ್ಲರ್ ವಿನೇಶ್ ಫೋಗಟ್ ಸೋನೆಪತ್ನಲ್ಲಿ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲು ಬೆಂಗಳೂರಿನ ಸಮಾರಂಭದಲ್ಲಿ, ಕಾಮನ್ವೆಲ್ತ್ ಟೇಬಲ್ ಟೆನಿಸ್ ಬಂಗಾರ ವಿಜೇತೆ ಮಣಿಕಾ ಬಾತ್ರಾ ಪೂಣೆಯಲ್ಲಿದ್ದು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮೂವರಿಗೆ ಕೊರೊನಾ ಸೋಂಕು
ಸಾಯ್ ನಿಗದಿಪಡಿಸಿರುವ 9 ತಾಣಗಳೆಂದರೆ ದೆಹಲಿ, ಮುಂಬೈ, ಕೋಲ್ಕತ್ತಾ, ಚಂಡೀಗಢ, ಬೆಂಗಳೂರು ಪುಣೆ, ಸೋನೆಪತ್, ಹೈದರಾಬಾದ್, ಭೋಪಾಲ್. ಪ್ರಶಸ್ತಿ ವಿಜೇತರು ತಮ್ಮ ತವರೂರಿಂದ ನಿಗದಿ ಪಡಿಸಿದ ತಾಣಗಳಿಗೆ ತೆರಳಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಜೇತರಲ್ಲಿ ಹೆಚ್ಚಿನವರು ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದು, ಇದರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ವರದಿಯಾಗಿದೆ.
ಒಟ್ಟು 9 ಮಂದಿ ಅನುಪಸ್ಥಿತಿ
'ಪ್ರಶಸ್ತಿ ವಿಜೇತರದಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಕ್ವಾರಂಟೈನ್, ಕೊರೊನಾ ಪಾಸಿಟಿವ್, ಆರೋಗ್ಯ ಸರಿಯಿಲ್ಲದಿರುವುದು ಮತ್ತು ಬೇರೆ ದೇಶದಲ್ಲಿರುವುದು ಹೀಗೆ ಬೇರೆ ಬೇರೆ ಕಾರಣಗಳಿಂದ ಒಟ್ಟಾರೆ 9 ಮಂದಿ ವಿಜೇತರು ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ,' ಎಂದು ಸಾಯ್ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಮಾಹಿತಿ ನೀಡಿದೆ.