ಕುಲ್ದೀಪ್ ಯಾದವ್
ಟೀಮ್ ಇಂಡಿಯಾದಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ಕುಲ್ದೀಪ್ ಯಾದವ್ ಇತ್ತೀಚೆಗೆ ಮಂಕಾಗಿ ಹೋಗಿದ್ದಾರೆ. ತಂಡದಲ್ಲಿದ್ದರೂ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ಸತತವಾಗಿ ವಿಫಲರಾಗಿದ್ದಾರೆ. ಕೆಲ ಅವಕಾಶ ದೊರೆತರೂ ಅದನ್ನು ಪರಿಣಾಮಕಾಇಯಾಗಿ ಬಳಸಲು ಅವರಿಂದ ಸಾಧ್ಯವಾಗಿಲ್ಲ. ಈ ಮಧ್ಯೆ ಇಂಗ್ಲೆಂಡ್ಗೆ ತೆರಳಿದ ಟೆಸ್ಟ್ ತಂಡದಿಂದ ಕುಲ್ದೀಪ್ ಯಾದವ್ ಹೊರಬಿದ್ದರು. ಆದರೆ ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರವಾಸದಲ್ಲಿ ಅವಕಾಶ ದೊರೆತು ಉತ್ತಮ ಪ್ರದರ್ಶನ ನೀಡಿದರಷ್ಟೇ ಕುಲ್ದೀಪ್ ಯಾದವ್ಗೆ ಟೀಮ್ ಇಂಡಿಯಾದಲಲ್ಇ ಮುಂದುವರಿಯುವ ಅವಕಾಶ ದೊರೆಯಬಹುದು.
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ ಕಿರಿ ವಯಸ್ಸಿನಲ್ಲಿಯೇ ತಮ್ಮಲ್ಲಿರುವ ಅದ್ಭುತ ಸಾಮರ್ಥ್ಯ ಹಾಗೂ ಪ್ರತಿಭೆಯಿಂದ ಎಲ್ಲರ ಚಿತ್ತ ತನ್ನತ್ತ ಬೀಳುವಂತೆ ಮಾಡಿದ ಆಟಗಾರ ಸಂಜು ಸ್ಯಾಮ್ಸನ್. ಐಪಿಎಲ್ನಲ್ಲಿಯೂ ಮಿಂಚುತ್ತಿರುವ ಸಂಜು ಈಗ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದಾರೆ. ಆದರೆ ಅಸ್ಥಿರ ಪ್ರದರ್ಶನ ಸಂಜು ಪಾಲಿಗೆ ಮುಳುವಾಗಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಲು ಸಂಜು ಸ್ಯಾಮ್ಸನ್ಗೆ ಸಾಧ್ಯವಾಗಿಲ್ಲ. ಈ ಮಧ್ಯೆ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ ಆಗಿ ಮಿಂಚಲು ಹಾತೊರೆಯುತ್ತಿರುವುದು ಸಂಜು ಪಾಲಿಗೆ ಭಾರತ ತಂಡದ ಅವಕಾಶ ಮತ್ತಷ್ಟು ಕ್ಷೀಣವಾದಂತೆ ಭಾಸವಾಗುತ್ತಿದೆ.
ಮನೀಶ್ ಪಾಂಡೆ
ಕರ್ನಾಟಕದ ಈ ಆಟಗಾರ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ. ದುರದೃಷ್ಟವಶಾತ್ ಪ್ರತಿಭೆಯಿದ್ದರೂ ಮನೀಶ್ ಪಾಲಿಗೆ ಅವಕಾಶಗಳು ಬಹಳಷ್ಟು ಕಡಿಮೆ ದೊರೆತಿದೆ. ತಂಡದಲ್ಲಿದ್ದರೂ ಹೆಚ್ಚಿನ ಕಾಲ ಬೆಂಚ್ ಕಾಯುತ್ತಲೇ ಕಳೆದಿದ್ದಾರೆ. ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರೂ ಅದು ತಂಡದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶ್ರೀಲಂಕಾ ಪ್ರವಾಸ ಮನೀಶ್ ಪಾಲಿಗೆ ಮತ್ತೊಂದು ಅವಕಾಶದಂತೆ ದೊರೆತಿದೆ. ಈ ಅವಕಾಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆ ಖಂಡಿತಾ ಇದೆ.