ಕೆಎಲ್ ಬೆಳವಣಿಗೆಯ ಹಿಂದೆ ಇದ್ದಾರೆ ಕೊಹ್ಲಿ
ಕೆಎಲ್ ರಾಹುಲ್ ಆಟಗಾರನಾಗಿ ಬೆಳೆಯಲು ಟೀಮ್ ಇಂಡಿಯಾದ ಹಾಗೂ ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾತ್ರವ ಮಹತ್ವದ್ದಾಗಿದೆ ಎಂದಿದ್ದಾರೆ ಶೋಯೆಬ್ ಅಖ್ತರ್. ರಾಹುಲ್ ಬ್ಯಾಟಿಂಗ್ನಲ್ಲಿನ ಬೆಳವಣಿಗೆಗೆ ಕೊಹ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ನೀಡಿದ ಅವಕಾಶದ ಕಾರಣದಿಂದಾಗಿಯೇ ಕೆಎಲ್ ರಾಹುಲ್ ಇಂದು ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿದ್ದಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಕೆಎಲ್ ರಾಹುಲ್ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ನೀಡುವ ಮೂಲಕ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗುವಂತೆ ಮಾಡಿದರು ಎಂದಿದ್ದಾರೆ ಶೋಯೆಬ್ ಅಖ್ತರ್.
ಲಕ್ನೋ ಆಟಗಾರನಾಗಿ ಹಾಗೂ ನಾಯಕನಾಗಿ ಮಿಂಚುತ್ತಿರುವ ರಾಹುಲ್
ಇನ್ನು ಓ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿರುವ ರಾಹುಲ್ ಆಡುರುವ 14 ಪಂದ್ಯಗಳಲ್ಲಿ 537 ರನ್ಗಳನ್ನು ಬಾರಿಸಿದ್ದಾರೆ. ಬುಧವಾರ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಲ್ಎಸ್ಜಿ ಎಲಿಮಿನೇಟರ್ ಪಂದ್ಯದಲ್ಲಿ ಎದುರಿಸಲಿದೆ.
ಎರಡು ಹೊಸ ತಂಡಗಳ ಪ್ರದರ್ಶನವನ್ನು ಕೊಂಡಾಡಿದ ಅಖ್ತರ್
ಇನ್ನು ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಎರಡು ಹೊಸ ತಮಡಗಳು ನೀಡುತ್ತಿರುವ ಪ್ರದರ್ಶನವನ್ನು ಶೋಯೆಬ್ ಅಖ್ತರ್ ಕೊಂಡಾಡಿದ್ದಾರೆ. "ಎರಡು ಹೊಸ ತಮಡಗಳಾದ ಲಕ್ನೋ ಹಾಗೂ ಗುಜರಾತ್ ತಾವು ಅದ್ಭುತ ಪ್ರದರ್ಶನ ನೀಡುತ್ತಿರುವುದನ್ನು ಸಾಬೀತುಪಡಿಸಿದೆ. ಈ ಪಂದ್ಯದಲ್ಲಿ ನನ್ನ ಬೆಂಬಲ ಕೆಎಲ್ ರಾಹುಲ್ಗೆ. ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವ ಮೂಲಕ ರಾಹುಲ್ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆಯೇ ಎಂಬುದನ್ನು ಕಾದು ನೋಡೋಣ" ಎಂದಿದ್ದಾರೆ ಶೋಯೆಬ್ ಅಖ್ತರ್.
ಕುತೂಹಲ ಘಟ್ಟ ತಲುಪಿದ ಐಪಿಎಲ್
ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಪ್ಲೇಆಪ್ನ ಪಂದ್ಯಗಳ ಪೈಕಿ ಮೊದಲ ಕ್ವಾಲಿಫೈಯರ್ ಪಂದ್ಯ ಮುಕ್ತಾಯವಾಗಿದ್ದು ಗುಜರಾತ್ ಟೈಟನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಬುಧವಾರ ಆರ್ಸಿಬಿ ಹಾಗೂ ಎಲ್ಎಸ್ಜಿ ವಿರುದ್ಧ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಇದರಲ್ಲಿ ಸೋಲು ಅನುಭವಿಸಿದ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇನ್ನು ಗೆದ್ದ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದ್ದು ಅಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ.