ಧೋನಿ ಕ್ರಿಕೆಟ್ನಿಂದ ದೂರವಾದ ನಂತರ
ಕಳೆದ ವರ್ಷದ ವಿಶ್ವಕಪ್ನಂತರ ಸೀಮಿತ ಓವರ್ಗಳ ಕ್ರಿಕೆಟ್ನಿಂದಲೂ ಎಂಎಸ್ ಧೋನಿ ದೂರುಳಿದರು. ಅದಾದಬಳಿಕ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಸಾಕಷ್ಟು ಪ್ರಯೋಗ ನಡೆಸಿತು. ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್ ಈ ಸಂದರ್ಭದಲ್ಲಿ ಅವಕಾಶವನ್ನು ಪಡೆದುಕೊಂಡರು. ಆದರೆ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಇನ್ನೂ ದೊರೆತಿಲ್ಲ.
ಗಂಗೂಲಿ ಹೇಳಿದ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್
ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಯಾರು ಎಂಬುದಕ್ಕೆ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಖಾಯಂ ವಿಕೆಟ್ ಕೀಪರ್ ಆಗಿರುವ ವೃದ್ಧಿಮಾನ್ ಸಾಹಾ ಹಾಗೂ ರಿಷಭ್ ಪಂತ್ ಭಾರತದ ಸದ್ಯದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಪಂತ್ಗೆ ಸಿಕ್ಕಿದೆ ಭರಪೂರ ಅವಕಾಶ
ಮಹೇಂದ್ರ ಸಿಂಗ್ ದೋನಿ ನಂತರ ಖಾಯಂ ವಿಕೆಟ್ ಕೀಪರ್ ಆಗಬಲ್ಲ ನಿರೀಕ್ಷೆ ಮೂಡಿಸಿದ್ದ ರಿಷಭ್ ಪಂತ್ಗೆ ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆದರೆ ರಿಷಭ್ ಪಂತ್ ಮಾತ್ರ ತಮ್ಮ ಮೇಲಿನ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲೇ ಇಲ್ಲ. ಹಾಗಿದ್ದರೂ ಮಾಜಿ ಆಟಗಾರರು ಪಂತ್ ಬಗ್ಗೆ ಅಪಾರವಾದ ವಿಶ್ವಾಸವನ್ನು ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ. ಕಳೆದ ನ್ಯೂಜಿಲೆಂಡ್ ವಿರುದ್ದದ ಸರಭಿಯಲ್ಲೂ ಇದೇ ಮುಮದುವರಿದಾಗ ಒಂದೆರಡು ಅವಕಾಶಗಳು ಸಂಜು ಸ್ಯಾಮ್ಸನ್ಗೆ ದೊರೆಯಿತಾದರೂ ಆ ಸಂದರ್ಭದಲ್ಲಿ ಅದನ್ನು ಎರಡೂ ಕೈಗಳಿಂದ ಬಳಸಿಕೊಳ್ಳಲು ಸಂಜು ವಿಫಲರಾದರು. ಅನಿವಾರ್ಯವಾಗಿ ವಿಕೆಟ್ ಕೀಪಿಂಗ್ ಜವಾಬ್ಧಾರಿ ಕೂಡ ಕೆಎಲ್ ರಾಹುಲ್ ಹೆಗಲಿಗೆ ಬಿದ್ದಿತ್ತು. ಈ ಎರಡು ಜವಾಬ್ಧಾರಿಯನ್ನು ರಾಹುಲ್ ಸಮರ್ಥವಾಗಿ ನಿರ್ವಹಿಸಿದ್ದಾರು.
ಐಪಿಎಲ್ನಲ್ಲೂ ಪಂತ್ ವಿಫಲ
ಇನ್ನು ರಿಷಭ್ ಪಂತ್ ಈ ಬಾರಿಯ ಐಪಿಎಲ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಡೀ ಟೂರ್ನಿಯಲ್ಲಿ ಪಂತ್ ಫೈನಲ್ ಪಂದ್ತದಲ್ಲಿ ಸಿಡಿಸಿದ ಅರ್ಧ ಶತಕವೇ ಏಕೈಕ ಅರ್ಧ ಶತಕವಾಗಿದೆ. ಹಾಗಿದ್ದರೂ ಪಂತ್ ಮೇಲೆ ಮಾಜಿ ಕ್ರಿಕೆಟಿಗರ ವಿಶ್ವಾಸ ಕಡಿಮೆಯಾಗಿಲ್ಲ. ಈಗ ಸೌರವ್ ಗಂಗೂಲಿ ಕೂಡ ಇದೇ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಂತ್ ಮಾತ್ರ ತನ್ನ ನೈಜ ಸಾಮರ್ಥ್ಯದ ಪ್ರದರ್ಶನವನ್ನು ಯಾವಾಗ ನೀಡುತ್ತಾರೆ ಎಂಬುದು ಅಬಿಮಾನಿಗಳ ಪ್ರಶ್ನೆಯಾಗಿದೆ.