ಹೈದರಾಬಾದಿನ ರಾಜೀವ್ ಗಾಂಧಿ ಮೈದಾನ
ಕೊರೊನಾ ಹಾವಳಿ ಇಲ್ಲದೇ ಇದ್ದಿದ್ದರಿಂದ ಕಳೆದ ಐಪಿಎಲ್ ಪಂದ್ಯ ಭಾರತದ ವಿವಿಧ ನಗರಗಳಲ್ಲಿ ನಡೆದಿತ್ತು. ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದ ಈ ಕ್ರೀಡಾಕೂಟ ಈ ಬಾರಿ ಗಲ್ಫ್ ನಲ್ಲಿ ಆಡುತ್ತಿರುವುದು ಗೊತ್ತಿರುವ ವಿಚಾರ. ಮಾರ್ಚ್ ಒಂದರಿಂದ ಆರಂಭವಾಗಿದ್ದ ಟೂರ್ನಿ, ಮೇ 12ರಂದು ಹೈದರಾಬಾದಿನ ರಾಜೀವ್ ಗಾಂಧಿ ಮೈದಾನದಲ್ಲಿ ಮುಕ್ತಾಯಗೊಂಡಿತ್ತು.
ಕಳೆದ ಬಾರಿ ಐಪಿಎಲ್ ನಲ್ಲಿ
ಆಸ್ಟ್ರಾ ರಾಜ್ ಎನ್ನುವ ಸಂಖ್ಯಾ ಶಾಸ್ತ್ರಜ್ಞ ಕಳೆದ ಬಾರಿ ಐಪಿಎಲ್ ನಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ವಿಚಾರದಲ್ಲಿ ನುಡಿದಿದ್ದ ಭವಿಷ್ಯ, ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಯಾವ ತಂಡ ಗೆಲ್ಲಲಿದೆ ಎನ್ನುವುದಕ್ಕಿಂತ, ಪ್ರಶಸ್ತಿ ಸುತ್ತಿಗೆ ಯಾವ ತಂಡ ಬರಲಿದೆ ಎಂದು ಅವರು ಹೇಳಿದ್ದರು.
ಬೆಂಗಳೂರು, ರಾಜಸ್ಥಾನ ಮತ್ತು ಪಂಜಾಬ್ ತಂಡ
ಲೀಗ್ ಪಂದ್ಯದಲ್ಲಿ ಏನಾಗಲಿದೆ ಎನ್ನುವುದನ್ನು ಶೇ.90ರಷ್ಟು ಕರಾರುವಕ್ಕಾಗಿ ನುಡಿದಿದ್ದ ಇವರು, ಐಪಿಎಲ್ ಗಾಗಿ ಹೊಸ ಸಾಫ್ಟವೇರ್ ಅನ್ನು ಸಿದ್ದಪಡಿಸಿದ್ದರು. ಇವರು ನುಡಿದಿದ್ದ ಪ್ರಕಾರ, ಬೆಂಗಳೂರು, ರಾಜಸ್ಥಾನ ಮತ್ತು ಪಂಜಾಬ್ ತಂಡಕ್ಕೆ ಯಾವುದೇ ಚಾನ್ಸ್ ಇಲ್ಲ ಎಂದಿದ್ದರು.
ಮುಂಬೈ ತಂಡ ಚೆನ್ನೈ ತಂಡದ ವಿರುದ್ದ ಒಂದು ರನ್ ನಿಂದ ಗೆಲುವು ಸಾಧಿಸಿತ್ತು
ಆಸ್ಟ್ರೋ ರಾಜ್ ಹೇಳಿದ್ದ ಪ್ರಕಾರ, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪೈಕಿ, ಎರಡು ತಂಡಗಳು ಪ್ರಶಸ್ತಿ ಸುತ್ತಿಗೆ ಸೆಣಸಲಿದೆ ಎಂದು ಹೇಳಿದ್ದರು. ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ತಂಡದ ವಿರುದ್ದ ಒಂದು ರನ್ ನಿಂದ ಗೆಲುವು ಸಾಧಿಸಿತ್ತು.