ಅನುಭವಿಗಳಿಗೆ ಬೆವರಿಳಿಸಿದ 18ರ ಪೋರ
ವರ್ಲ್ಡ್ ಕಪ್ ವಿಜೇತ 19ವರ್ಷದ ತಂಡದಲ್ಲಿ ಆಡಿ ಬಂದಿರುವ ಶುಬ್ಮನ್ ಗಿಲ್ ಭರ್ಜರಿ ಶತಕಗಳಿಸುವ ಮೂಲಕ ತಾವು ಕಿರಿಯರ ತಂಡದಕಷ್ಟೆ ಅಲ್ಲ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಲೂ ಶಕ್ತರಿರುವುದಾಗಿ ಸಾಬೀತು ಮಾಡಿಬಿಟ್ಟರು. ವಿನಯ್ಕುಮಾರ್, ಪ್ರಸಿದ್ಧ೦ ಕೃಷ್ಣ, ಪ್ರವೀಣ್ ದುಬೆ ಅವರಂತಹಾ ಅನುಭವಿ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಅವರು ಆತ್ಮವಿಶ್ವಾಸದ ಇನ್ನಿಂಗ್ಸ್ ಕಟ್ಟಿದರು.
ಹಿರಿಯರಿಗೆ ಕಿರಿಯನ ಸವಾಲ್
ಕೇವಲ 18 ವರ್ಷ ವಯಸ್ಸಿನ ಶುಬ್ಮನ್ ಗಿಲ್ ಪಂಜಾಬ್ ಪರ ನಿನ್ನೆಯ ಪಂದ್ಯದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದರು. 122 ಎಸೆತ ಎದುರಿಸಿ 123 ರನ್ ಗಳಿಸಿ ಔಟಾಗದೆ ಉಳಿದರು ಶುಬ್ಮನ್ ಗಿಲ್. ಘಟಾನುಗಟಿ ಬೌಲರ್ಗಳಿಗೂ ಬೆವರಿಳಿಸಿದ ಅವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ಗಳಿವೆ. ಅವರಿಗೆ ಅತ್ಯುತ್ತಮ ಜೊತೆಯಾಟ ನೀಡಿದ ಮನದೀಪ್ ಸಿಂಗ್ 64 ರನ್ ಗಳಿಸಿದರು ಅವರ ನಂತರ ಯುವರಾಜ್ ಸಿಂಗ್ 36 ಮತ್ತು ಗುರುಕೀರತ್ ಸಿಂಗ್ 35 ರನ್ ಗಳಿಸಿದರು. ಪಂಜಾಬ್ ಕರ್ನಾಟಕದ ಮುಂದೆ 269 ರನ್ಗಳ ಗುರಿ ನೀಡಿತು.
88 ಬಾಲ್ಗಳಲ್ಲಿ ಶತಕ
ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ರಾಹುಲ್ ಈ ಪಂದ್ಯದಲ್ಲಿ ಪರಾರಂಭದಲ್ಲಿ ಎಚ್ಚರಿಕೆ ಆಟವಾಡಿದರು. ಅವರು ಖಾತೆ ತೆರೆಯಲು 18 ಬಾಲ್ ತೆಗೆದುಕೊಂಡರು ಆದರೆ ಅರ್ಧ ಶತಕ ಗಳಿಸಿದ ನಂತರ ವೇಗವಾಗಿ ಬ್ಯಾಟ್ ಬೀಸಿ ಕೇವಲ 88 ಬಾಲ್ಗಳಲ್ಲೇ ಶತಕ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಪವನ್ ದೇಶಪಾಂಡೆ 53 ರನ್ ಗಳಿಸಿದರು. ಪಂದ್ಯ ಗೆದ್ದಿರುವ ಪಂಜಾಬ್ಗೆ 4 ಪಾಯಿಂಟ್ಸ್ ಲಭ್ಯವಾಗಿದೆ. ಕರ್ನಾಟಕ ಮುಂದಿನ ಪಂದ್ಯ ನಾಳೆ ಒಡಿಶಾ ವಿರುದ್ಧ ನಡೆಯಲಿದೆ.
ರಾಹುಲ್ ಬಿರುಸಿನ ಆಟ
ರಾಹುಲ್ ಮತ್ತು ಪವನ್ ಅವರು ಅತ್ಯುತ್ತಮ ಜೊತೆಯಾಟ ಆಡಿದರು. ಬಿರುಸಿನ ಆಟ ಆಡಿದ ಪವನ್ ರಾಹುಲ್ಗಿಂತ ಮೊದಲೇ ಪವನ್ ಅರ್ಧಶತಕದ ಗಡಿ ದಾಟಿದರು. ಗುರುಕೀರತ್ ಮಾನ್ ಎಸೆತದಲ್ಲಿ ಪವನ್ ಎತ್ತಿದ ಸಿಕ್ಸರ್ಗೆ ಚೆಂಡು ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿಗೆ ಅಪ್ಪಳಿಸಿತು. ಸ್ಪಿನ್ನರ್ ಅಭಿಷೇಕ್ ಶರ್ಮಾ ಎಸೆತದಲ್ಲಿ ಪವನ್ ಔಟಾದ ನಂತರ ರಾಹುಲ್ ಬಿರುಸಿನ ಆಟವಾಡಿದರು. ಕೆ. ಗೌತಮ್ (16 ರನ್) ಕೂಡ ಬೀಸಾಟವಾಡಿದರು. ಇದರಿಂದಾಗಿ ರನ್ ಗಳಿಕೆಯ ವೇಗ ಹೆಚ್ಚಿತು. ಆದರೆ ಅನಿರುದ್ಧ ಜೋಶಿ, ಆರ್. ಸಮರ್ಥ್ ಹೆಚ್ಚು ರನ್ ಗಳಿಸಲಿಲ್ಲ.