ನವದೆಹಲಿ: ಕೋವಿಡ್-19 ದ್ವಿತೀಯ ಅಲೆ ಭಾರತದಲ್ಲಿ ತಲ್ಲಣ ಸೃಷ್ಠಿಸಿದೆ. ಕಳೆದ ವಾರದಲ್ಲೇ ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ಗಳ ಕೊರತೆ ಎದುರಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ.
ಪಂಜಾಬ್ ವಿರುದ್ಧ ಬೆಂಗಳೂರು ಸೋಲಿಗೆ ಕಾರಣ ಹೇಳಿದ ಬ್ರಾಡ್ ಹಾಗ್
ಭಾರತದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣಕ್ಕೇನೆ ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಒಂದಿಷ್ಟು ಪ್ರಮುಖ ಕ್ರಿಕೆಟಿಗರು ಹಿಂದೆ ಸರಿದಿದ್ದರು. ಅವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಆರ್ ಅಶ್ವಿನ್ ಕೂಡ ಒಬ್ಬರಾಗಿದ್ದರು.
ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಕೋವಿಡ್ ಸೋಂಕು ಕುಟುಂಬಸ್ಥರನ್ನು ಭೀತಿಗೆ ತಳ್ಳಿರುವ ಬಗೆಯನ್ನು ಹೇಳಿಕೊಂಡಿದ್ದಾರೆ. ಮನೆಯ 10 ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಈ ವಾರ 'ಭಯಾನಕ ವಾರ'ವಾಗಿ ಕಾಣಿಸಿದೆ ಎಂದು ಪ್ರೀತಿ ಹೇಳಿದ್ದಾರೆ.
ಭಾರತದಲ್ಲಿ ವಿಶ್ವಕಪ್ ಆಯೋಜನೆ ವಿಚಾರವಾಗಿ ಬಿಸಿಸಿಐ ಮಹತ್ವದ ಹೇಳಿಕೆ
'6 ಮಂದಿ ದೊಡ್ಡವರು, 4 ಮಂದಿ ಮಕ್ಕಳು ಒಂದೇ ವಾರ ಕೋವಿಡ್-19ಗೆ ಪಾಸಿಟಿವ್ ಬಂದಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಬೇರೆ ಬೇರೆ ಮನೆ, ಆಸ್ಪತ್ರೆಗಳಲ್ಲಿದ್ದೇವೆ. ಇದು ಭಯಾನಕ ವಾರವಾಗಿದೆ,' ಎಂದು ಪ್ರೀತಿ ಮಾಹಿತಿ ನೀಡಿದ್ದಾರೆ. ಪ್ರೀತಿ ಹಲವಾರು ಟ್ವೀಟ್ಗಳಲ್ಲಿ ಕೊರೊನಾ ಕುರಿತ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.