ಸಿಡ್ನಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಭಾರತಕ್ಕೆ ನೀಡಿರುವ ಕೊಡುಗೆಯನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್, ಭಾರತದ ಮಾಜಿ ಮುಖ್ಯ ಕೋಚ್ ಗ್ರೆಗ್ ಚಾಪೆಲ್ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಸೂತ್ರವನ್ನು ದ್ರಾವಿಡ್ ಭಾರತೀಯರು ಬಲಿಷ್ಟ ತಂಡ ಕಟ್ಟುವಲ್ಲಿ ಬಳಸಿಕೊಂಡರು ಎಂದು ಚಾಪೆಲ್ ಹೇಳಿದ್ದಾರೆ.
ಶ್ರೀಲಂಕಾ ಪ್ರವಾಸ ಕೈಗೊಳ್ಳಬಹುದಾದ ಕೊಹ್ಲಿ,ರೋಹಿತ್ ಇಲ್ಲದ 21 ಸದಸ್ಯರ ತಂಡ
ಆಸ್ಟ್ರೇಲಿಯಾದ ಕ್ರಿಕೆಟ್ ಸೂತ್ರವನ್ನು ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ನಲ್ಲಿ ಅನುಸರಿಸಿದರು. ದೇಸಿ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳನ್ನು ನಿರ್ಮಿಸುವಲ್ಲಿ ದ್ರಾವಿಡ್ ಕೊಡುಗೆ ನೀಡಿದರು. ಹೀಗಾಗಿಯೇ ಭಾರತ ಈಗ ಬಲಿಷ್ಠ ತಂಡವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಗ್ರೆಗ್ ಚಾಪೆಲ್ ಹೇಳಿದ್ದಾರೆ.
ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯಸ್ಥರಾಗಿರುವ ದ್ರಾವಿಡ್ ಬಹಳಷ್ಟು ಯುವ ಪ್ರತಿಭೆಗಳು ಬೆಳೆಯಲು ದಾರಿಯಾದರು. ಇಂಡಿಯಾ ಎ ಮತ್ತು ಅಂಡರ್-19 ತಂಡಗಳಲ್ಲಿ ಯುವ ಪ್ರತಿಭೆಗಳು ಮಿನುಗಲು ನೆರವಾಗುವಂಥ ಮಾರ್ಗದರ್ಶನ ನೀಡಿದ್ದರು. ಈಗ ಆ ಪ್ರತಿಭೆಗಳೇ ಟೀಮ್ ಇಂಡಿಯಾಕ್ಕೆ ಬಲ ತುಂಬುತ್ತಿದ್ದಾರೆ.
ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್
ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಡಾಟ್ ಜೊತೆ ಮಾತನಾಡಿದ ಚಾಪೆಲ್, 'ರಾಹುಲ್ ದ್ರಾವಿಡ್ ನಮ್ಮ ತಲೆಯನ್ನು ಹೆಕ್ಕಿದರು. ನಾವೇನು ಮಾಡುತ್ತಿದ್ದೇವೋ ಅದನ್ನೇ ಭಾರತೀಯ ಕ್ರಿಕೆಟ್ನಲ್ಲಿ ಬಳಸಿದರು. ದೊಡ್ಡ ಜನಸಂಖ್ಯೆಯ ಭಾರತ ಇದನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡಿತು,' ಎಂದಿದ್ದಾರೆ.