ಹೊಸ ಕೋಚ್ ಅನಿವಾರ್ಯ
ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಶ್ರೀಲಂಕಾ ಪ್ರವಾಸಕ್ಕೆ ಲಭ್ಯವಾಗುವುದಿಲ್ಲ. ಹೀಗಾಗಿ ಕೋಚಿಂಗ್ ವಿಭಾಗವೂ ಕೂಡ ಹೊಸಬರಿಂದಲೇ ಕೂಡಿರಲಿದೆ.
ರಾಹುಲ್ ದ್ರಾವಿಡ್ಗೆ ಇದೆ ಅನುಭವ
ಈ ಜವಾಬ್ಧಾರಿ ರಾಹುಲ್ ದ್ರಾವಿಡ್ ಅವರಿಗೆ ಲಭಿಸುವ ಸಾಧ್ಯತೆಯಿದೆ. ಅಂಡರ್-19 ತಂಡ ಹಾಗೂ ಭಾರತ ಎ ತಂಡಕ್ಕೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ರಾಹುಲ್ ದ್ರಾವಿಡ್ ಈ ಜವಾಬ್ಧಾರಿಗೆ ಹೊಸಬರಲ್ಲ. ಜೊತೆಗೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಬಹುದಾದ ಬಹುತೇಕ ಆಟಗಾರರು ಅಂಡರ್-19 ಅಥವಾ ಭಾರತ ಎ ತಂಡದಲ್ಲಿ ದ್ರಾವಿಡ್ ಅಡಿಯಲ್ಲಿ ಪಳಗಿದವರಾಗಿದ್ದಾರೆ. ಹೀಗಾಗಿ ಈ ಆಟಗಾರರೊಂದಿಗೆ ಹೊಂದಾಣಿಕೆ ಹಾಗೂ ಅವರ ಸಾಮರ್ಥ್ಯದ ಅರಿವು ದ್ರಾವಿಡ್ಗೆ ಉತ್ತಮವಾಗಿರಲಿದೆ.
ಶ್ರೀಲಂಕಾ ಪ್ರವಾಸ
ಈಗಿನ ವರದಿಯ ಪ್ರಕಾರ ವಿರಾಟ್ ಕೊಹ್ಲಿ ಹೊರತಾದ ಭಾರತ ತಂಡ ಜುಲೈ 5 ರಂದು ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಜುಲೈ 13, 16 ಮತ್ತು 19ರಂದು ಏಕದಿನ ಪಂದ್ಯಗಳನ್ನು ಆಡಿ ನಂತರ ಮೂರು ಪಂದ್ಯಗಳ ಟಿ20 ಸರಣಿ ಜುಲೈ 22, 24 ಹಾಗೂ 27ರಂದು ನಡೆಯುವ ಸಂಭವವಿದೆ.