ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಸೌರಾಷ್ಟ್ರ ನಾಯಕ ಜಯದೇವ್‌ಗೆ ಗೆಲುವಿನ ವಿದಾಯ, ಕರ್ನಾಟಕಕ್ಕೆ ಕಹಿ!

Ranji Trophy 2018: Saurashtra beat Karnataka by 87 runs

ರಾಜ್‌ಕೋಟ್, ಡಿಸೆಂಬರ್ 8: ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 8) ನಡೆದ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಎ'ಯ 5ನೇ ಸುತ್ತಿನ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಕರ್ನಾಟಕ 87 ರನ್ ಸೋಲನುಭವಿಸಿದೆ. ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಸೌರಾಷ್ಟ್ರ ನಾಯಕ ಜಯದೇವ್‌ ಶಾಗೆ ಗೆಲುವಿನ ವಿದಾಯ ದೊರೆಯಿತು.

ಹಾಕಿ ವಿಶ್ವಕಪ್: ಕೆನಡಾ ವಿರುದ್ಧ ಭರ್ಜರಿ ಜಯ, ಭಾರತ ಕ್ವಾರ್ಟರ್‌ ಫೈನಲ್‌ಗೆಹಾಕಿ ವಿಶ್ವಕಪ್: ಕೆನಡಾ ವಿರುದ್ಧ ಭರ್ಜರಿ ಜಯ, ಭಾರತ ಕ್ವಾರ್ಟರ್‌ ಫೈನಲ್‌ಗೆ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಸೌರಾಷ್ಟ್ರಕ್ಕೆ ನಾಯಕ ಜಯದೇವ್ ಉತ್ತಮ ರನ್ ಕೊಡುಗೆ ನೀಡಿದರು. ಶಾ ಒಟ್ಟು 97 ರನ್ ಸೇರಿಸಿದರು. ಕ್ರಿಕೆಟ್‌ಗೆ ವಿದಾಯ ಹೇಳಿರುವ ಜಯದೇವ್ ಅವರ ಕೊನೆಯ ಪಂದ್ಯ ಇದಾಗಿತ್ತು. ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ನಲ್ಲಿ 316 ರನ್, ದ್ವಿತೀಯ ಇನ್ನಿಂಗ್ಸ್ ನಲ್ಲಿ 79 ರನ್ ಗಳಿಸಿ ಆಟ ಮುಗಿಸಿತ್ತು.

ಆದರೆ ಕರ್ನಾಟಕ ಬ್ಯಾಟಿಂಗ್ ದೌರ್ಬಲ್ಯ ತೋರಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ದೇಗಾ ನಿಶ್ಚಲ್ 58, ಕರುಣ್ ನಾಯರ್ 63 ರನ್ ನೆರವಿನೊಂದಿಗೆ ವಿನಯ್ ಕುಮಾರ್ ಬಳಗ ಒಟ್ಟು 217 ರನ್ ಕಲೆ ಹಾಕಿದರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಯರ್ 30, ಶ್ರೇಯಸ್ ಗೋಪಾಲ್ 27 ರನ್ ಬೆಂಬಲದೊಂದಿಗೆ 91 ರನ್ ಪೇರಿಸಿ ಶರಣಾಯಿತು.

Story first published: Saturday, December 8, 2018, 21:46 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X